ಹುಬ್ಬಳ್ಳಿ: ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ಅಂತರಕಾಲೇಜು `ಅಣುಕು ಸಂಸತ್' ಎಂಬ ಚರ್ಚಾಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಧಾರವಾಡದ ಎಸ್ಡಿಎಂ ವೈದ್ಯಕೀಯ ಕಾಲೇಜು ಪ್ರಥಮ ಬಹುಮಾನ ಪಡೆಯಿತು. ಬಿವಿಬಿ ಎಂಜಿನಿಯರಿಂಗ್ ಕಾಲೇಜು ರನ್ನರ್ಸ್ಅಪ್ ಪುರಸ್ಕೃತವಾಯಿತು.
ಪ್ರಥಮ ಬಹುಮಾನ ಪಡೆದ ಎಸ್ಡಿಎಂ ವೈದ್ಯಕೀಯ ಕಾಲೇಜಿನ ತಂಡಕ್ಕೆ ಪಾರಿತೋಷಕ ಹಾಗೂ ರೂ 6,000 ನಗದು ಬಹುಮಾನ ನೀಡಲಾಯಿತು. ಈ ತಂಡದಲ್ಲಿ ಚೇತನ್ ದೇಶಪಾಂಡೆ, ಗವಿಸಿದ್ಧೇಶ ರೋಣದ, ಕಾರ್ತಿಕ್ ಶ್ರೀನಿವಾಸ, ದೀಪಕ್ ಬೆಟ್ಟದೂರ, ದೈವಿಕ್ ಶೆಟ್ಟಿ, ಕಾರ್ತಿಕ್ ಶೆಟ್ಟಿ, ಕಾರ್ತಿಕ್ ಅಯ್ಯರ್ ಹಾಗೂ ಸುಹಾಸ ಶೆಟ್ಟಿ ಭಾಗವಹಿಸಿದ್ದರು.