ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್(ಎಸ್ಬಿಎಂ)ನ ಸಾಲ ನೀತಿ ಮತ್ತು ರಿಸ್ಕ್ ಮ್ಯಾನೇಜ್ಮೆಂಟ್ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿ ಎನ್.ಪಾರ್ಥಸಾರಥಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು.
ಬಿಹುಪಾದ ನಂದಾ ಅವರು ಕಂಪೆನಿ ಅಭಿವೃದ್ಧಿ ಅಧಿಕಾರಿ ಮತ್ತು ಪ್ರಧಾನ ವ್ಯವಸ್ಥಾಪಕರಾಗಿ ಬಡ್ತಿ ಪಡೆದಿದ್ದರೆ, ವಿ.ವಿಶ್ವನಾಥನ್ ಅವರು ಟ್ರೆಸರಿ, ಹಣಕಾಸು ಮತ್ತು ಸರ್ಕಾರಿ ವಹಿವಾಟು ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.