ಕೊಲ್ಹಾರ (ವಿಜಾಪುರ): ಮುಂಬೈನ ಏರ್ ಇಂಡಿಯಾ ತಂಡ ಹಾಗೂ ಬೆಂಗಳೂರಿನ ಎಸ್ಬಿಎಂ ತಂಡಗಳು ಸ್ವಾಮಿ ವಿವೇಕಾನಂದ ಯುವಕ ಮಂಡಳಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಸೋಮವಾರ ಫೈನಲ್ ತಲುಪಿದವು.
ಮೊದಲ ಸೆಮಿಫೈನಲ್ನಲ್ಲಿ ಏರ್ ಇಂಡಿಯಾ ತಂಡ 24-8ರಿಂದ ರೆಡ್ ಆರ್ಮಿ ದೆಹಲಿ ತಂಡವನ್ನು ಮಣಿಸಿದರೆ, ಇನ್ನೊಂದು ಸೆಮಿಫೈನಲ್ನಲ್ಲಿ ಬೆಂಗಳೂರಿನ ಎಸ್ಬಿಎಂ ತಂಡ 17-6ರಿಂದ ರೈಲ್ವೆ ವೀಲ್ ಫ್ಯಾಕ್ಟರಿ ತಂಡವನ್ನು ಪರಾಭವಗೊಳಿಸಿತು.