ನವದೆಹಲಿ(ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಆಯಾ ರಾಜ್ಯಗಳ ಪಾತ್ರ ಏನು ಎಂದು ವಿವರಣೆ ಕೇಳಿ ಸುಪ್ರೀಂಕೋರ್ಟ್ ಗುರುವಾರ ಏಳು ರಾಜ್ಯಗಳಿಗೆ ನೋಟಿಸ್ ಕಳಿಸಿದೆ.
ಅ. 29ರೊಳಗೆ ಉತ್ತರಿಸುವಂತೆ ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್, ಛತ್ತೀಸ್ಗಡ, ಒಡಿಶಾ, ಮತ್ತು ಮಹಾರಾಷ್ಟ್ರಕ್ಕೆ ನೋಟಿಸ್ ಜಾರಿ ಮಾಡಿದೆ. ನಿಕ್ಷೇಪ ಹಂಚಿಕೆ ಸಂಬಂಧ 4 ವಿಷಯಗಳ ಕುರಿತು ಪ್ರತಿಕ್ರಿಯಿ ಸಲು ಆಯಾ ರಾಜ್ಯಗಳಿಗೆ ಸುಪ್ರೀಂಕೋರ್ಟ್ ಪೀಠ ಸೂಚಿಸಿದೆ.
ಜಿಂದಾಲ್ ವಿಚಾರಣೆ: 2008ರಲ್ಲಿ ಜಾರ್ಖಂಡದ ಅಮರಕೊಂಡ ಮುರುಗದಂಗಲ್ ಕಲ್ಲಿದ್ದಲು ನಿಕ್ಷೇಪ ಪಡೆಯಲು ಪಿತೂರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ನವೀನ್ ಜಿಂದಾಲ್ ಅವರನ್ನು ಸಿಬಿಐ ಗುರುವಾರ ಪ್ರಶ್ನೆಗೊಳಪಡಿಸಿತು.