ನವದೆಹಲಿ (ಪಿಟಿಐ): ರೂಪಾಯಿ ಮೌಲ್ಯ ಕುಸಿತ, ಜಿಡಿಪಿ ಇಳಿಕೆ ಇತ್ಯಾದಿ ಸಂಗತಿಗಳಿಂದ ಬಿಕ್ಕಟ್ಟಿಗೆ ಸಿಲುಕಿರುವ ದೇಶದ ಆರ್ಥಿಕತೆಯನ್ನು ಸಮತೋಲನ ಸ್ಥಿತಿಗೆ ತರಲು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಸಹಾಯ ಕೇಳುವುದಿಲ್ಲ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ.
ದೇಶಕ್ಕೆ ಎದುರಾಗಿರುವ ತಾತ್ಕಾಲಿಕ ಆರ್ಥಿಕ ಸವಾಲುಗಳನ್ನು ಎದುರಿಸಲು `ಐಎಂಎಫ್'ನ ನೆರವು ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.