ಲಖನೌ/ ನವದೆಹಲಿ (ಪಿಟಿಐ): ಗಲಭೆಗ್ರಸ್ತ ಮುಜಾಫರ್ನಗರದಲಿ್ಲ ಪರಿಸ್ಥಿತಿ ಸುಧಾರಿಸುತ್ತಿದ್ದು,, ಬುಧವಾರ ಐದು ತಾಸು ಕರ್ಫ್ಯೂ ಸಡಿಲಿಸಲಾಗಿತ್ತು. ಆದರೆ ಭಾಗ್ಪತ್ನಲ್ಲಿ ಹಿಂಸಾಚಾರ ನಡೆದು ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ಗಾಯಗೊಂಡಿದ್ದಾರೆ.
ಮಧಾ್ಯಹ್ನ 12ರಿಂದ ಸಂಜೆ 5 ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗಿತು್ತ. ಪರಿಸಿ್ಥಿತಿ ಈಗ ನಿಯಂತ್ರಣದಲಿ್ಲರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಿಐಎಲ್ ವಿಚಾರಣೆಗೆ ಸುಪ್ರೀಂ ಅಸು್ತ: ಮುಜಾಫರ್ನಗರ ಗಲಭೆ ಬಗೆ್ಗ ಸಿಬಿಐ ತನಿಖೆ ಕೋರಿ ಸಲಿ್ಲಸಿದ ಸಾರ್ವಜನಿಕ ಹಿತಾಸಕಿ್ತ ಅರ್ಜಿಯನು್ನ ತುರ್ತಾಗಿ ವಿಚಾರಣೆಗೆ ಕೈಗೆತಿ್ತಕೊಳ್ಳಲು ಸುಪ್ರೀಂಕೋರ್ಟ್ ಬುಧವಾರ ಒಪಿ್ಪಗೆ ಸೂಚಿಸಿದೆ. ನ್ಯಾಯಮೂರ್ತಿ ಜಿ.ಎಸ್. ಸಿಂಘಿ್ವ ಅವರ ನೇತೃತ್ವದ ನ್ಯಾಯ ಪೀಠವು ಗುರುವಾರ ಅರ್ಜಿಯ ವಿಚಾರಣೆ ನಡೆಸಲಿದೆ.
ಗಲಭೆಗೆ ಕಾರಣ ಹುಡುಕಲು ಮತು್ತ ಹಿಂಸಾಚಾರ ನಿಯಂತಿ್ರಸಿ ತೊಂದರೆಗೆ ಸಿಲುಕಿದ ಜನರಿಗೆ ಅಗತ್ಯ ರಕ್ಷಣೆ ಒದಗಿಸಲು ಕೇಂದ್ರ ಮತು್ತ ಉತ್ತರಪ್ರದೇಶ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಮೊಹಮ್ಮದ್ ಹರೂನ್ ಮತಿ್ತತರರು ಈ ಪಿಐಎಲ್ ಅರ್ಜಿ ಸಲಿ್ಲಸಿದ್ದಾರೆ.
ಶಿಂಧೆ ಶಂಕೆ: ಉತ್ತರಪ್ರದೇಶದ ಮುಜಾಫರ್ನಗರದಲಿ್ಲ ನಡೆದಹಿಂಸಾಚಾರದ ಹಿಂದೆ ಕೆಲ ರಾಜಕೀಯ ಪಕ್ಷಗಳ ಕೈವಾಡದ ಶಂಕೆಯನು್ನ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಬುಧವಾರ ವ್ಯಕ್ತಪಡಿಸಿದರು.
2014ರ ಲೋಕಸಭಾ ಚುನಾವಣೆ ಮುನ್ನ ದೇಶದಲಿ್ಲ ಇನ್ನಷು್ಟ ಕೋಮುಗಲಭೆ ನಡೆಯುವ ಸಾಧ್ಯತೆ ಯನು್ನ ತಳಿ್ಳಹಾಕಲಾಗದು. ಈಗಾಗಲೇ ಕೇಂದ್ರ ಗೃಹ ಸಚಿವಾಲಯ 7 ರಾಜ್ಯ ಗಳಿಗೆ ಮುನೆ್ನಚ್ಚರಿಕೆ ನೀಡಿದೆ ಎಂದು ಅವರು ಸುದಿ್ದಗಾರರಿಗೆ ತಿಳಿಸಿದರು.
ಪರಿಹಾರ ಮೊತ್ತ ರೂ10 ಲಕ್ಷಕ್ಕೆ ಏರಿಕೆ: ಮುಜಾಫರ್ನಗರ ಕೋಮು ಗಲಭೆ ಯಲಿ್ಲ ಮೃತಪಟ್ಟವರ ಕುಟುಂಬ ಗಳಿಗೆ ಉತ್ತರಪ್ರದೇಶ ಸರ್ಕಾರ ರೂ 10 ಲಕ್ಷ ಪರಿಹಾರವನು್ನ ಬುಧವಾರ ಪ್ರಕಟಿಸಿದೆ.
ಈ ಹಿಂದೆ, ರಾಜ್ಯ ಸರ್ಕಾರವು ಮೃತ ಟಿವಿ ಪತ್ರಕರ್ತನ ಕುಟುಂಬಕೆ್ಕ ಹತು್ತ ಲಕ್ಷ ಮತು್ತ ಇತರರಿಗೆ ರೂ 5 ಲಕ್ಷ ಪರಿಹಾರ ಘೋಷಿಸಿತು್ತ. ಆದರೆ ಸಾವಿನ ಸಂಖೆ್ಯ ಹೆಚಿ್ಚದ ಹಿನೆ್ನಲೆಯಲಿ್ಲ ಎಲ್ಲರಿಗೂ ಪರಿಹಾರ ಮೊತ್ತವನು್ನ ಹೆಚಿ್ಚಸಿದೆ. ಇದಲ್ಲದೆ, ಗಂಭೀರವಾಗಿ ಗಾಯಗೊಂಡವರಿಗೆ ರೂ 50 ಸಾವಿರ ಪರಿಹಾರ ನೀಡಿದೆ.
ಯುಪಿಎ ವಿರುದ್ಧ ಎಸ್ಪಿ ವಾಗ್ದಾಳಿ (ಆಗ್ರಾ ವರದಿ): ದೇಶವು ಕಳೆದ ಹತು್ತ ವರ್ಷಗಳಲಿ್ಲ ಜಗತಿ್ತನ ಬೇರಾವ ರಾಷ್ಟ್ರ ಕಾಣದಷು್ಟ ಕೆಟ್ಟ ಪರಿಸಿ್ಥತಿಯನು್ನ ಕಂಡಿದೆ ಎಂದು ಎಸ್.ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಬುಧವಾರ ಇಲಿ್ಲ ಯುಪಿಎ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲಿ್ಲ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜನತೆ ಈಗ ಕೇಂದ್ರದಲಿ್ಲ ಪರ್ಯಾಯ ಸರ್ಕಾರ ಬರುವುದನು್ನ ಬಯಸಿದೆ’ ಎಂದು ಹೇಳಿದರು.
ಆಜಂಖಾನ್ ಗೈರು: ಈ ಮಧೆ್ಯ, ಪಕ್ಷದ ಹಿರಿಯ ಮುಸಿ್ಲಂ ನಾಯಕ ಆಜಂ ಖಾನ್ ಈ ಸಭೆಯಿಂದ ಹೊರಗುಳಿದಿ ದ್ದಾರೆ. ಆದರೆ ‘ಇದಕೆ್ಕ ಹೆಚಿ್ಚನ ಮಹತ್ವ ನೀಡಬೇಕಿಲ್ಲ. ಗೈರು ಹಾಜರಾದವರಲಿ್ಲ ಆಜಂ ಮಾತ್ರವಲ್ಲವಲ್ಲದೆ ಇತರ ಮುಖಂಡರೂ ಇದ್ದಾರೆ’ ಎಂದು ಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ಗೋಪಾಲ್ ಯಾದವ್ ಸುದಿ್ದಗಾರರ ಪ್ರಶೆ್ನಗೆ ಪ್ರತಿಕಿ್ರಯಿಸಿದ್ದಾರೆ.
ಮೂಲಗಳ ಪ್ರಕಾರ, ಅಯೋಧೆ್ಯ ಯಾತೆ್ರ ಕೈಗೊಂಡ ವಿಎಚ್ಪಿ ನಾಯಕ ಅಶೋಕ್ ಸಿಂಘಾಲ್ ಮತಿ್ತತರರನು್ನ ಮುಲಾಯಂ ಭೇಟಿ ಮಾಡಿರುವುದು ಮತು್ತ ಮುಜಾಫರ್ನಗರ ಗಲಭೆ
ತಡೆಯಲು ರಾಜ್ಯ ಸರ್ಕಾರದ ವೈಫಲ್ಯ ಕುರಿತು ಆಜಂ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.
ಈ ಘಟನೆಗಳು ಮುಲಾಯಂ ಅವರು ಮುಸ್ಲಿಂ ಧಾರ್ಮಿಕ ಮುಖಂಡ ರಲ್ಲದೆ, ಪಕ್ಷದೊಳಗಿನ ಮುಸಿ್ಲಂ ನಾಯಕ ರಿಂದಲೂ ವಿರೋಧ ಎದುರಿಸಬೇಕಾದ ಸಂದಿಗ್ಧ ಪರಿಸ್ಥಿತಿ ಸೃಷ್ಟಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.