ಐಪಿಸಿಯ 309ನೇ ಕಲಂ ರದ್ದುಗೊಳಿಸಲು ಕಾನೂನು ಆಯೋಗ ಶಿಫಾರಸು ಮಾಡಿ, ಜಾರಿಗೆ ಒಂದು ವರ್ಷ ಕಾಲಮಿತಿಯನ್ನು ನೀಡಿದೆ. ಇದರ ಜಾರಿ ಸಾಧ್ಯವಾಗದೆ ಇ್ದ್ದದಲ್ಲಿ, ಹಿರಿಯ ನಾಗರಿಕರಿಗಾದರೂ ಈ ಕಲಂ ರ್ದ್ದದುಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ದಯಾಮರಣ ಕಾನೂನಿಗೆ ಸಂಬಂಧಿಸಿದಂತೆ ಆಯ್ದ ದೇಶಗಳ ಸಾಲಿನಲ್ಲಿ ಭಾರತವೂ ನಿಂತಿದೆ ಎಂದು ಸುಪ್ರೀಂಕೋರ್ಟ್ ದಿಟ್ಟತನದಿಂದ ಹೇಳಿಕೆ ನೀಡಿದೆ. ಸಾರಾಸಗಟಾಗಿ ತಳ್ಳಿಹಾಕಿಲ್ಲ. ದೀರ್ಘ ಕಾಲ ಕೋಮಾದಲ್ಲಿದ್ದ ರೋಗಿಯ ಜೀವರಕ್ಷಕ ಸಾಧನಗಳನ್ನು ತೆಗೆಯುವುದು, ಮೂತ್ರಪಿಂಡದ ರೋಗಿಗಳಿಗೆ ಡಯಾಲಿಸಿಸ್ ನಿಲ್ಲಿಸುವುದು, ಮಾರಣಾಂತಿಕ ರೋಗದಿಂದ ನರಳುತ್ತಿರುವ ರೋಗಿಗಳಿಗೆ ಆ್ಯಂಟಿಬಯಾಟಿಕ್ ಔಷಧಿ ನಿಲ್ಲಿಸುವುದು, ವ್ಯಕ್ತಿಗೆ ನೇರವಾಗಿ ಅನುಮತಿ ಬೇಡ, ಪರೋಕ್ಷವಾಗಿ ದಯಾಮರಣ ನೀಡಬಹುದು ಎಂದಿದೆ.
ಔಷಧೋಪಚಾರದಲ್ಲಿ ಇದ್ದಾಗಲೇ ರೋಗಿಯ ನರಳಾಟ ನೋಡಲು ಆಗುವುದಿಲ್ಲ. ಈ ಎಲ್ಲವನ್ನೂ ನಿಲ್ಲಿಸಿದಾಗ ರೋಗಿಯ ಗತಿ ಏನು? ನೀರಿನಿಂದ ಹೊರಬಿದ್ದ ಮೀನಿನಂತೆ ಆಗುತ್ತದೆ. ರೋಗಿಗೆ ಬೇಕಿರುವುದು ನೆಮ್ಮದಿಯ ಸಾವು. ಅದೇ ದಯಾಮರಣ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.