ಬೆಂಗಳೂರು (ಐಎಎನ್ಎಸ್): ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ ವಿರುದ್ದ ತಿರುಗಿ ಬಿದ್ದಿದ್ದ ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ್ದ
ವಿಧಾನ ಸಭಾಧ್ಯಕ್ಷರ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಕಳೆದ ವರ್ಷ ಅಕ್ಟೋಬರ್
10ರಂದು ಮುಖ್ಯಮಂತ್ರಿ ವಿರುದ್ದ ಬಂಡೆದ್ದಿದ್ದ ಐವರು ಪಕ್ಷೇತರ ಶಾಸಕರನ್ನು ವಿಧಾನಸಭಾಧ್ಯಕ್ಷ
ಕೆ.ಜಿ.ಬೋಪಯ್ಯ ಅನರ್ಹಗೊಳಿಸಿದ್ದರು. ಇದನ್ನು ಈ ಐವರು ಶಾಸಕರು ಹೈಕೋರ್ಟ್ನಲ್ಲಿ
ಪ್ರಶ್ನಿಸಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾ. ಮೋಹನ್ ಶಾಂತನಗೌಡರ್,
ನ್ಯಾ.ಅಬ್ದುಲ್ ನಜೀರ್ ಹಾಗೂ ನ್ಯಾ. ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಸಭಾದ್ಯಕ್ಷ
ಬೋಪಯ್ಯ ತೆಗೆದುಕೊಂಡ ಕ್ರಮ ಸರಿ ಎಂದು ಹೇಳಿ ತೀರ್ಪು ನೀಡಿದೆ.
ಅನರ್ಹಗೊಂಡ ಪಕ್ಷೇತರ
ಶಾಸಕರಾದ ಗೂಳಿಹಟ್ಟಿ ಶೇಖರ್, ಡಿ.ಸುಧಾಕರ್, ಪಿ.ಎಂ.ನರೇಂದ್ರ ಸ್ವಾಮಿ, ವೆಂಕಟರಮಣಪ್ಪ ಹಾಗೂ
ಶಿವರಾಜ ತಂಗಡಿ ಅವರು ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ
ತಿಳಿಸಿದ್ದಾರೆ.