ಭುವನೇಶ್ವರ(ಐಎಎನ್ ಎಸ್) ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯಲ್ಲಿ ಪೊಲೀಸರೊಂದಿಗೆ ಶನಿವಾರ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ 14 ಮಂದಿ ನಕ್ಸಲೀಯರು ಹತರಾಗಿದ್ದಾರೆ.
ಛತ್ತಿಸ್ಗಢ ಗಡಿಗೆ ಸಮೀಪದ ಅರಣ್ಯದಲ್ಲಿ ಹಲವು ನಿಮಿಷಗಳ ಕಾಲ ಈ ಗುಂಡಿನ ಕಾಳಗ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಖಿಲೇಶ್ವರ್ ಸಿಂಗ್ ನೇತೃತ್ವದ ತಂಡದಲ್ಲಿ ಜಿಲ್ಲಾ ಸ್ವಯಂ ಸೇವಕ ಪಡೆಯ ಸಿಬ್ಬಂದಿಯೂ ಇದ್ದ ಪೊಲೀಸ್ ತಂಡವು ತಮ್ಮತ್ತ ನಕ್ಸಲಿಯರು ಗುಂಡು ಹಾರಿಸಿದಾಗ ಪ್ರತಿಯಾಗಿ ಅವರ ಮೇಲೆ ದಾಳಿ ನಡೆಸಿದರು.
ಈ ದಾಳಿಯಲ್ಲಿ 14 ಮಂದಿ ನಕ್ಸಲೀಯರು ಹತರಾಗಿದ್ದಾರೆ. ಅಲ್ಲದೆ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಯಿತು ಎಂದು ಐಜಿಪಿ ಸೋಮೇಂದ್ರ ಪ್ರಿಯದರ್ಶಿ ತಿಳಿಸಿದ್ದಾರೆ.
ರಾಜಧಾನಿ ಭುವನೇಶ್ವರ ದಿಂದ 600 ಕಿ.ಮೀ ದೂರದಲ್ಲಿರುವ ಮಲ್ಕನ್ ಗಿರಿಯು ನಕ್ಸಲೀಯರ ಪ್ರಬಲ ನೆಲೆಯಾಗಿದೆ.