ಮೈಸೂರು: ಚಿರನಿದ್ರೆಗೆ ಜಾರಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಚಿತಾಭಸ್ಮ ಸ್ಥಳದಲ್ಲಿ ಅಸ್ಥಿಸಂಚಯನ ಮತ್ತು ಹಾಲುತುಪ್ಪ ಎರೆಯುವ ವಿಧಿ–ವಿಧಾನಗಳನ್ನು ಚದುರಂಗ ಕಾಂತರಾಜೇ ಅರಸ್ ಗುರುವಾರ ನೆರವೇರಿಸಿದರು.
ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಗಾಯತ್ರಿದೇವಿ ಅವರ ಪುತ್ರ ಚದುರಂಗ ಕಾಂತರಾಜೇ ಅರಸ್, ಕಾವೇರಿ ಸಂಗಮದಲ್ಲಿ ಕಾಮಾಕ್ಷಿ ದೇವಿ ಅವರ ಪತಿ ಆತ್ಮನ್ಯದೇವ, ಇಂದ್ರಾಕ್ಷಿ ದೇವಿ ಅವರ ಪತಿ ರಾಜಾಚಂದ್ರರಾಜೇ ಅರಸ್ ಮತ್ತು ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಮೀನಾಕ್ಷಿದೇವಿ ಅವರ ಪುತ್ರ ವರ್ಚಸ್ ಸಿದ್ಧಲಿಂಗರಾಜೇ ಅರಸ್ ಅವರು ಸಂಚಯನ ಅಸ್ಥಿ ವಿಸರ್ಜಿಸಿದರು.
ಅರಮನೆಯ ವೈದಿಕರೊಬ್ಬರು ಹರಿದ್ವಾರ ಮತ್ತು ಕಾಶಿಗೆ ಅಸ್ಥಿ ವಿಸರ್ಜನೆಗೆ ತೆರಳಿದ್ದಾರೆ.