ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆಯರ್‌ ಅಸ್ಥಿ ವಿಸರ್ಜನೆ

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೈಸೂರು: ಚಿರನಿದ್ರೆಗೆ ಜಾರಿದ ಶ್ರೀಕಂಠದತ್ತ ನರಸಿಂಹರಾಜ ಒಡೆ­ಯರ್‌ ಅವರ ಚಿತಾಭಸ್ಮ ಸ್ಥಳದಲ್ಲಿ ಅಸ್ಥಿಸಂಚಯನ ಮತ್ತು ಹಾಲುತುಪ್ಪ ಎರೆಯುವ ವಿಧಿ–ವಿಧಾನಗಳನ್ನು ಚದುರಂಗ ಕಾಂತರಾಜೇ ಅರಸ್‌ ಗುರುವಾರ ನೆರವೇರಿಸಿದರು.

ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ­ಯಲ್ಲಿ ಗಾಯತ್ರಿದೇವಿ ಅವರ ಪುತ್ರ ಚದುರಂಗ ಕಾಂತರಾಜೇ ಅರಸ್‌, ಕಾವೇರಿ ಸಂಗಮದಲ್ಲಿ ಕಾಮಾಕ್ಷಿ ದೇವಿ ಅವರ ಪತಿ ಆತ್ಮನ್ಯದೇವ, ಇಂದ್ರಾಕ್ಷಿ ದೇವಿ ಅವರ ಪತಿ ರಾಜಾ­ಚಂದ್ರರಾಜೇ ಅರಸ್‌ ಮತ್ತು ತಿರು­ಮಕೂಡಲಿನ ತ್ರಿವೇಣಿ ಸಂಗಮ­ದಲ್ಲಿ ಮೀನಾಕ್ಷಿದೇವಿ ಅವರ ಪುತ್ರ ವರ್ಚಸ್‌ ಸಿದ್ಧಲಿಂಗರಾಜೇ ಅರಸ್‌ ಅವರು ಸಂಚಯನ ಅಸ್ಥಿ ವಿಸರ್ಜಿ­­ಸಿ­ದರು.

ಅರಮನೆಯ ವೈದಿಕರೊಬ್ಬರು ಹರಿದ್ವಾರ ಮತ್ತು ಕಾಶಿಗೆ ಅಸ್ಥಿ ವಿಸರ್ಜನೆಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT