ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ: ಮಾಹಿತಿ ನೀಡಲು ಮನವಿ

Last Updated 8 ಡಿಸೆಂಬರ್ 2013, 19:44 IST
ಅಕ್ಷರ ಗಾತ್ರ

ಕೃಷ್ಣರಾಜಪುರ : ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಕೊರತೆ ಇದ್ದು ದೂಳು ತುಂಬಿದ ರಸ್ತೆ, ರಸ್ತೆಗಳನ್ನು ಸಮತಟ್ಟು ಮಾಡುವುದು ಸೇರಿದಂತೆ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿಸಿದ ಮಟ್ಟದಲ್ಲಿ ನಡೆದಿಲ್ಲ ಎಂದು ತಹಶೀ­ಲ್ದಾರ್‌ ಬಿ.ಆರ್‌.ಹರೀಶ್‌ ನಾಯ್ಕ ಅಸಮಾ­ಧಾನ ವ್ಯಕ್ತಪಡಿಸಿದರು.

ಕೆ.ಆರ್‌.ಪುರ ಹಿರಿಯರ ವೇದಿಕೆ ಬಸವನಪುರ ಅಮರ ಜ್ಯೋತಿ ಕಾಲೆಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯ­ಕ್ರಮ­ದಲ್ಲಿ ಮಾತನಾಡಿದರು.

ಸ್ಥಳೀಯರು ಅಧಿಕಾರಿಗಳಿಗೆ ಸಹ­ಕಾರ ನೀಡಬೇಕು. ಸರ್ಕಾರಿ ಜಾಗ ಒತ್ತುವರಿಗೆ ಸಂಬಂಧಿಸಿದಂತೆ ಮಾಹಿತಿ ನೀಡ­ಬೇಕು ಎಂದು ತಿಳಿಸಿದರು.

ವಾರಕೊಮ್ಮೆ ನೀರು ಪೂರೈಕೆ­ಯಾಗು­ತ್ತಿದ್ದರೂ, ಸಾವಿ­ರಾರು ರೂಪಾಯಿ ವಿದ್ಯುತ್‌ ಬಿಲ್‌ ಪಾವತಿಸ­ಬೇಕಾಗಿದೆ. ಹೀಗಾಗಿ ಅನಧಿಕೃತ ನೀರು ಪೂರೈಕೆ ಸಂಪರ್ಕವನ್ನು ಸಮಾರೋ­ಪಾ­ದಿಯಲ್ಲಿ ಕಡಿತಗೊಳಿಸಲು ಎರಡು ಜಾಗೃತ­ದಳ­ಗಳನ್ನು ನೇಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT