`ದೆಹಲಿ ವಿಶೇಷ ಪೊಲೀಸ್ ಸಿಬ್ಬಂದಿ ಕಾಯ್ದೆಯ (ಡಿಎಸ್ಪಿಇ) ಕಲಂ 6ರ ಅಡಿಯಲ್ಲಿ ವಿಧಿಸಿದ್ದ ನಿರ್ಬಂಧ ಈ ನ್ಯಾಯಾಲಯ ಸೂಚಿಸಿರುವ ತನಿಖೆಗೆ ಅನ್ವಯಿಸುವುದಿಲ್ಲ' ಎಂದು ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ನೇತೃತ್ವದ ತ್ರಿಸದಸ್ಯ ಅರಣ್ಯ ಪೀಠ ತಿಳಿಸಿದೆ.
2012ರ ಸೆಪ್ಟೆಂಬರ್ 5ರ ವರದಿಯನ್ವಯ ಪ್ರಾಥಮಿಕ ತನಿಖೆ (ಪಿಇ) ಹಾಗೂ ಸರ್ವೋಚ್ಚ ನ್ಯಾಯಾಲಯ ನೇಮಕದ ಕೇಂದ್ರೀಯ ಉನ್ನತಾಧಿಕಾರ ಸಮಿತಿಯ (ಸಿಇಸಿ) ಶಿಫಾರಸುಗಳಲ್ಲಿ ಕೇಳಿ ಬಂದ ಹಾಗೂ 50 ಸಾವಿರ ಮೆಟ್ರಿಕ್ ಟನ್ಗೂ ಹೆಚ್ಚು ತೂಕದ ಕಬ್ಬಿಣದ ಅದಿರನ್ನು ರಫ್ತು ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಸಹ ಪೀಠ ಹಸಿರು ನಿಶಾನೆ ತೋರಿದೆ.