ಬೆಂಗಳೂರು: ರೋಟರಿ ಕ್ಲಬ್ ಬೆಂಗಳೂರು ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಲಿಯ ನಾಲ್ವರು ಒಳಚರಂಡಿ ಕೆಲಸಗಾರರಿಗೆ `ಪ್ರೈಡ್ ಆಫ್ ವರ್ಕ್ಮನ್ಶಿಪ್ ಪ್ರಶಸ್ತಿ~ ನೀಡಿ ಗೌರವಿಸಲಾಯಿತು.
ಒಳಚರಂಡಿ ಮೇಲ್ವಿಚಾರಕ ಪಿ.ನರಸಿಂಹಯ್ಯ, ಮೇಸ್ತ್ರಿ ಕಾಟುಮಯ್ಯ, ಒಳಚರಂಡಿ ನೌಕರರಾದ ವೇಣುಗೋಪಾಲ್ ಹಾಗೂ ಪಿಳ್ಳಪ್ಪ ಅವರಿಗೆ ಕ್ಲಬ್ನ ಸಹಾಯಕ ಗವರ್ನರ್ ಸುರೇಶ್ ಹರಿ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಹರಿ, `ಒಳಚರಂಡಿ ನೌಕರರು ನಿರ್ವಹಿಸುವ ಕೆಲಸ ಅತ್ಯಂತ ಕಷ್ಟಕರವಾದದ್ದು. ಜಲಮಂಡಲಿಯ ನೌಕರರು ಮಾಡುತ್ತಿರುವ ಕೆಲಸಕ್ಕೆ ಸಂಸ್ಥೆ ನೀಡುತ್ತಿರುವ ಪುಟ್ಟ ಕಾಣಿಕೆ ಇದು. ಇವರು ಇನ್ನೂ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಮಂಡಲಿಗೆ ಕೀರ್ತಿ ತರಬೇಕು ಎಂದರು.