ಗೂಂಡಾ ಕಾಯ್ದೆ ಪ್ರಕಾರ ಅಪರಾಧ ಎಸಗಿದ ಅಥವಾ ಎಸಗಲಿದ್ದಾನೆ ಎನ್ನುವ ವ್ಯಕ್ತಿಯನ್ನು ಅನು ಮಾನ ಬಂದ ತಕ್ಷಣ ಬಂಧಿಸಬಹುದು. ಪ್ರಜಾ ಪ್ರಭುತ್ವದಲ್ಲಿ ವ್ಯಕ್ತಿಯೊಬ್ಬನನ್ನು ವಿಚಾರಣೆ ಇಲ್ಲದೇ ವರ್ಷಾನುಗಟ್ಟಲೆ ಬಂಧನದಲ್ಲಿಡಲು ಅವಕಾಶ ಕಲ್ಪಿಸುವುದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ. ಈಗಿರುವ ಕಾನೂನನ್ನೇ ಸಮರ್ಪಕವಾಗಿ ಜಾರಿಗೆ ತಂದರೆ ಅನೇಕ ಹೇಯ ಕೃತ್ಯಗಳನ್ನು ತಡೆಗಟ್ಟಬಹುದು.
ಪರಿಸ್ಥಿತಿ ಕೈಮೀರಿದೆ ಎಂದು ಭಾವಿಸಿ ಸರ್ಕಾರ ಇಂಥದೊಂದು ಅತಿ ರೇಕದ ಕ್ರಮಕ್ಕೆ ಮುಂದಾಗಿರಬಹುದು. ತಡೆಯುವ ಬಗೆ ಹೇಗೆ ಎಂದು ತಿಳಿಯದೆಯೂ ಈ ಕ್ರಮಕ್ಕೆ ಕೈಹಾಕಿರಬಹುದು. ಇಂದಿನ ಬಹುತೇಕ ಸಮಸ್ಯೆಗಳಿಗೆ ಸಾಕ್ಷ್ಯ ಹೇಳುವವರಿಗೆ ರಕ್ಷಣೆ ಇಲ್ಲದಿರುವುದೇ ಕಾರಣ. ಸಾಕ್ಷ್ಯ ಹೇಳಲು ಹಿಂಜರಿಕೆ ಇರುವುದರಿಂದಲೇ ನಮ್ಮ ದೇಶದಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಇದೆ.