ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರರು ಉಡುಪಿ ಮಾಧ್ವಮಠದ ಪೇಜಾವರ ಶ್ರೀಗಳ ಪಾದಕ್ಕೆರಗಿರುವ ದೃಶ್ಯ (ಪ್ರವಾ ಅ. 9) ಕಂಡು ಅಘಾತವಾಯಿತು! ಈ ನಾಡಿನ ಶೂದ್ರರ, ದಲಿತರ, ಹಿಂದುಳಿದವರ `ಸಾಕ್ಷಿಪ್ರಜ್ಞೆ~ಯಾಗಬೇಕಿದ್ದ ಕಂಬಾರರು ಈ ರೀತಿ ಸಾರ್ವಜನಿಕವಾಗಿ ಮಠಾಧಿಪತಿಯೊಬ್ಬರ ಪಾದಕ್ಕೆ ಬಿದ್ದಿರುವುದು, ಜ್ಞಾನಪೀಠ ಪಡೆದ ಅಮಲಿನಲ್ಲಿದ್ದ ನಮ್ಮಂತವರಿಗೆ ವಾಸ್ತವತೆ ಅರಿವು ಮೂಡಿಸಿದೆ.