ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಕುಸಿತ: 9 ಜನರ ಬಂಧನ

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮುಂಬೈ(ಐಎಎನ್‌ಎಸ್/ಪಿಟಿಐ): ಕಳೆದ ಗುರುವಾರ ಠಾಣೆಯ ಶಿಲಾಪಥ್ ಪ್ರದೇಶದಲ್ಲಿ ಏಳು ಅಂತಸ್ತಿತ ಬಹುಮಹಡಿ ಕಟ್ಟಡ ಕುಸಿದು 74 ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಮತ್ತೊಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರ ಸಂಖ್ಯೆ 9ಕ್ಕೇರಿದೆ.

ವಿಚಾರಣೆಗಾಗಿ 14 ದಿನಗಳ ಕಾಲ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿ ನ್ಯಾಯಾಲಯವು ಆದೇಶ ಹೊರಡಿಸಿದೆ.

ಬಂಧಿತರಲ್ಲಿ ಅಮಾನತುಗೊಂಡಿರುವ ಠಾಣೆ ನಗರಪಾಲಿಕೆ ಉಪ ಆಯುಕ್ತ ದೀಪಕ್ ಚವಾಣ್, ಸಹಾಯಕ ಆಯುಕ್ತ ಬಾಬಾ ಸಾಹೇಬ್ ಅಂದಾಲೆ, ಗುಮಾಸ್ತ ಕಿರಣ್ ಮಡಕೆ,   ಎನ್‌ಸಿಪಿ ನಗರ ಪಾಲಿಕೆ ಸದಸ್ಯ ಹೀರಾ ಪಾಟೀಲ್, ಪೊಲೀಸ್ ಅಧಿಕಾರಿ ಸೈಯದ್ ಮತ್ತು ಭೂ ವ್ಯವಹಾರದ ದಲ್ಲಾಳಿ ಜಬ್ಬಾರ್ ಪಟೇಲ್ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT