ವಿಶ್ವಸಂಸ್ಥೆ (ಪಿಟಿಐ): ಕಡಲ್ಗಳ್ಳರ ಹಾವಳಿಯನ್ನು ತಡೆಗಟ್ಟಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮಗ್ರ ನೀತಿಯೊಂದನ್ನು ರೂಪಿಸುವ ಅಗತ್ಯವಿದೆ ಎಂದು ಭಾರತ ಪ್ರತಿಪಾದಿಸಿದೆ.
ವಿಶ್ವಸಂಸ್ಥೆಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಭಾರತದ ರಾಯಭಾರಿ ಹರದೀಪ್ ಸಿಂಗ್ ಪುರಿ ಅವರು `ಸೋಮಾಲಿಯಾ ದೇಶದ ಕರಾವಳಿ ಪ್ರದೇಶದ ಕಡಲ್ಗಳ್ಳತನದ ಪ್ರಕರಣಗಳು ಅಂತರರಾಷ್ಟ್ರೀಯ ಸಮುದಾಯಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ~ ಎಂದು ಅಭಿಪ್ರಾಯಪಟ್ಟರು.