ಬ್ಯಾಂಕಾಕ್ (ಪಿಟಿಐ): ಸರ್ಕಾರಿ ವಿರೋಧಿ ದಂಗೆ ಮತ್ತು ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಸೋಮವಾರ ಸಂಸತ್ ವಿಸರ್ಜನೆ ಮಾಡಿದ ಥಾಯ್ಲೆಂಡ್ ಪ್ರಧಾನಿ ಯಿಂಗ್ಲಕ್ ಶಿನವತ್ರಾ ತೀವ್ರ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.ಥಾಯ್ ಆರ್ಮಿ ಕ್ಲಬ್ನಲ್ಲಿ ನಡೆದ ವಾರದ ಸಚಿವ ಸಂಪುಟದ ಸಭೆ ಈ ಘಟನೆಗೆ ಸಾಕ್ಷಿಯಾಯಿತು.
ಸಂಸತ್ ವಿಸರ್ಜನೆಯ ನಂತರ ನಡೆದ ಮೊದಲ ಸಭೆಯಲ್ಲಿ ಮಾತನಾಡುವ ವೇಳೆ ತೀವ್ರ ಭಾವುಕರಾದ ಅವರು, ತಾನು ಮಾಡಿದ ತಪ್ಪಾದರೂ ಏನು ಎಂದು ವಿರೋಧಿಗಳನ್ನು ಪ್ರಶ್ನಿಸಿದರು.
ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ಪ್ರತಿಭಟನಾಕಾರರು 24 ಗಂಟೆಗಳ ಗಡುವು ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಯ ನಂತರ ತುರ್ತುಸಭೆ ನಡೆಸಿದ ಆಡಳಿತರೂಢ ಫೆ ಥಾಯ್ ಪಕ್ಷ, ಶಿನವತ್ರಾ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುವುದಾಗಿ ಘೋಷಿಸಿದೆ.
ಥಾಯ್ಲೆಂಡ್ನಲ್ಲಿ ಮಂಗಳವಾರ ಯಾವುದೇ ಪ್ರತಿಭಟನೆ ನಡೆಯಲಿಲ್ಲ.