`ಇಷ್ಟಾರ್ಥ~ ಜೂಟಾಟ
ಬೆಂಗಳೂರಿನ ಗಣೇಶ ಮಂದಿರದ ಬಳಿ ಪ್ರೇಮಿಗಳನ್ನು ರೌಡಿಗಳು ಅಟ್ಟಿಸಿಕೊಂಡು ಬರುತ್ತಿದ್ದರು. ಇವರು ಇಷ್ಟೆಲ್ಲಾ ಮಾಡಿದ್ದು `ಇಷ್ಟಾರ್ಥ~ಕ್ಕಾಗಿ. ಮಲ್ಲಮ್ಮ ವಿ ಸುಬ್ರಮಣ್ಯ ನಿರ್ಮಿಸುತ್ತಿರುವ ಚಿತ್ರ `ಇಷ್ಟಾರ್ಥ~. ಪ್ರಾಣ್ ಚಿತ್ರದ ನಿರ್ದೇಶಕರು. ಸೆಲ್ವಂ ಛಾಯಾಗ್ರಹಣ , ಮಧುರ ಅವರ ಸಂಗೀತ , ಅಲ್ಟಿಮೆಟ್ ಶಿವು ಸಾಹಸ, ರಾಜೇಶ್ ಬ್ರಹ್ಮಾವರ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ತಾರಾಗಣದಲ್ಲಿ ವಿಜಯ ಸುಬ್ರಮಣ್ಯ, ಶ್ರೀಪ್ರಿಯ ಬೋಪಯ್ಯ, ಸುಜಿತ್, ಕಿಲ್ಲರ್ ವೆಂಕಟೇಶ್, ರಮೇಶ್ ಪಂಡಿತ್, ಬ್ಯಾಂಕ್ ಜನಾರ್ದನ್, ಶಂಕರ್ ಅಶ್ವತ್, ಅಪೂರ್ವ, ಕೃಷ್ಣಾ, ಆದಿತ್ಯ, ಮೈಕೆಲ್ ಮಧು, ವಿಶ್ವನಾಥ್ ಮುಂತಾದವರಿದ್ದಾರೆ.