ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸರ ತತ್ವ ಇಂದಿಗೂ ಪ್ರಸ್ತುತ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಜೀವನದಲ್ಲಿ ಸ್ವತಃ ನೊಂದುಬೆಂದರೂ ಇತರರಿಗಾಗಿ ಅತ್ಯುತ್ಕೃಷ್ಟವಾದ ಕೀರ್ತನೆಗಳನ್ನು ರಚಿಸುವ ಮೂಲಕ ಸಮಾಜ ಸುಧಾರಣೆಗೆ ಕಾರಣರಾದ ದಾಸಶ್ರೇಷ್ಠ ಕನಕದಾಸರ ತತ್ವಾದರ್ಶಗಳನ್ನು ಇಂದಿಗೂ ಪ್ರಸ್ತುತವಾಗಿವೆ  ಎಂದು ಉಪಮೇಯರ್ ಶಶಿಕಲಾ ಅಭಿಪ್ರಾಯಪಟ್ಟರು.

ಕನಕ ನೌಕರರ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ವತಿಯಿಂದ ನಗರದ ಗಾಂಧಿಭವನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಕನಕ ಜಯಂತಿ ಉತ್ಸವ ಹಾಗೂ ಸಮಾಜದ ಉತ್ತಮ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶರಣಯ್ಯ ಸ್ವಾಮಿ ಒಡೆಯರ್ ಸಾನ್ನಿಧ್ಯವಹಿಸಿದ್ದರು. ವಿಮ್ಸ ಪ್ರಾಚಾರ್ಯ ಶ್ರೀನಿವಾಸಮೂರ್ತಿ, ಡಾ. ತರಸಾಲಪ್ಪ, ಕೃಷ್ಣಕುಮಾರ್, ಕೆ.ಚಂದ್ರಶೇಖರ್, ಆನಂದ್ ಉಕ್ಕಲಿ, ಶಿವಲಿಂಗಯ್ಯ, ಸಿದ್ಧನಗೌಡ ಸಿಂಧುವಾಳ, ಚಿದಾನಂದಪ್ಪ, ಎಂ.ಜಿ. ಮೇಟಿ, ಸೋಮಶೇಖರ್, ಕೆರಕೋಡಪ್ಪ ಉಪಸ್ಥಿತರಿದ್ದರು. ಲಕ್ಷ್ಮಿ ಪವನಕುಮಾರ್ ಪ್ರಾರ್ಥಿಸಿದರು.
 
ಟಿ. ಮರಿಸ್ವಾಮಿ ಸ್ವಾಗತಿಸಿದರು. ಬಿ.ಟಿ. ಕಲ್ಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಯರ‌್ರಿಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಸಮಾಜದ ನೌಕರರನ್ನು  ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT