ಎಲ್ಲಿಯವರೆಗೆ ಕನ್ನಡಕ್ಕಾಗಿ ನಮ್ಮ ಕರ್ತವ್ಯ ಪಾಲಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮದೇ ನಾಡಿನಲ್ಲಿ ಕನ್ನಡ ಭಾಷೆಗೆ ಪ್ರಥಮ ಸ್ಥಾನಮಾನ ಸಿಗವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಮರಾಠಿ, ಕೊಂಕಣಿ, ಖಾರ್ವಿ, ನವಾಯಿತರು, ದಖನಿಗಳು, ದಾಲ್ಜಿ ಸೇರಿದಂತೆ ಹಲವು ಜನಾಂಗದವರಲ್ಲಿ ಅವರವರ ಭಾಷೆಗಳ ಬದಲಾಗಿ ಕನ್ನಡ ಭಾಷಾಭಿಮಾನ ಮೂಡಿಸಬೇಕಾಗಿದೆ ಎಂದರು.
ಭಟ್ಕಳದಲ್ಲಿ ಆದ ಅಭಿವೃದ್ಧಿ, ಆಗಬೇಕಾದ ಅಭಿವೃದ್ಧಿ, ಸಮಸ್ಯೆಗಳು, ಚತುಷ್ಟಥ ರಸ್ತೆಯಾದರೆ ಅಭಿವೃದ್ಧಿಗೆ ಪೂರಕ ಎಂಬ ಆಗ್ರಹ, ಸರ್ವಜನಾಂಗದ ಸಂಪ್ರದಾಯ, ಕಟ್ಟಳೆಗಳ ಬಗ್ಗೆ ಸಮಗ್ರವಾಗಿ ಅವರುತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.