ಮಕ್ಕಳು ಮೈದುಂಬಿ ಕುಣಿ-ಕುಣಿದರು
`ಅಲಿಬಾಬಾ ನಲವತ್ತು ಕಳ್ಳರು~ ಕಿಟ್ಟಿ ಕಥೆಯಲ್ಲಿ
ಹೇಳತೇನ ಕೇಳ, ಬೆಳ್ಳಿಮೀನು, ತಕರಾರಿನವರು
ಅಲ್ಲಿ, ಕವಿತೆಗಳನ್ನು ಹಾಡಿದರು, ಎದೆತುಂಬಿ ಸೂರು.
ಕನ್ನಡವೆಂದರೆ ಕಂಬಾರ, ಅಂತೆಯೇ ಬಲುಸಿಂಗಾರ
ಕಬ್ಬಿಣದ ಕಾಸಿ ಹದ ಮಾಡಿದಂತೆ ಹತಿಯಾರ
ದುಂಡುಮೊಗದ, ತುಂಬು ಮೀಸೆಯ ಸರದಾರ
ಅರಳು ಹುರಿದಂತ ಮಾತು ಕನ್ನಡಕ್ಕದುವೆ ಸೇತು.