ಪೆನುಕೊಂಡ (ಆಂಧ್ರಪ್ರದೇಶ): ರೈಲು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಕನ್ನಡಿಗರು ಭಾಷಾ ಸಮಸ್ಯೆಯನ್ನು ಎದುರಿಸಬೇಕಾಯಿತು.
ಬಹುತೇಕ ಮಂದಿ ಕನ್ನಡಿಗರಾಗಿದ್ದು, ಅವರಿಗೆ ತೆಲುಗು ಬರುತ್ತಿರಲಿಲ್ಲ. ಅಲ್ಲಿನ ಆಂಧ್ರಪ್ರದೇಶ ಪೊಲೀಸರಿಗೆ ಕನ್ನಡ ಬರುವುದಿಲ್ಲ. ಹೀಗಾಗಿ ಘಟನೆಯಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರ ಕುಟುಂಬ ಸದಸ್ಯರಿಗೆ ಅಲ್ಲಿನ ಪೊಲೀಸರೊಂದಿಗೆ ಸುಗಮ ಸಂವಹನ ನಡೆಸಲು ಕಷ್ಟವಾಯಿತು. ಕೇಂದ್ರ ಸಚಿವರು, ಆಂಧ್ರ ಸಿಎಂ. ಸೇರಿದಂತೆ ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿದಾಗ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರಿಂದ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.