ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಎಚ್‌ಎಎಲ್‌ಗೆ ನಿರಾಸೆ, ಕೆಎಸ್‌ಪಿ ತಂಡ ಚಾಂಪಿಯನ್

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದಾವಣಗೆರೆ: ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡದವರು ನಗರದ ದ್ರೋಣ ಕ್ರೀಡಾ ಸಮಿತಿ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್ ಆದರು.

ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಕೆಎಸ್‌ಪಿ ತಂಡ 24-19 ರಲ್ಲಿ ಎಚ್‌ಎಎಲ್ ತಂಡವನ್ನು ಮಣಿಸಿತು. ಸೊಗಸಾದ ಪ್ರದರ್ಶನ ನೀಡಿದ ಪೊಲೀಸ್ ತಂಡದವರು ವಿರಾಮದ ವೇಳೆಗೆ 13-5 ಪಾಯಿಂಟ್‌ಗಳ ಮುನ್ನಡೆ ಪಡೆದಿದ್ದರು. ಪಂದ್ಯದ ಎರಡನೇ ಅವಧಿಯಲ್ಲಿ ಎಚ್‌ಎಎಲ್ ತಂಡ ಮರುಹೋರಾಟದ ಸೂಚನೆ   ನೀಡಿತಾದರೂ, ಗೆಲುವನ್ನು       ತನ್ನದಾಗಿಸಿಕೊಳ್ಳಲು ವಿಫಲವಾಯಿತು.

ಎಚ್‌ಎಎಲ್ ತಂಡದ ಆಟಗಾರ ಶಾಜು `ಉತ್ತಮ ದಾಳಿಗಾರ~ ಪ್ರಶಸ್ತಿಗೆ ಭಾಜನರಾದರು. ವಿಜಯಾ ಬ್ಯಾಂಕ್ ತಂಡದ ಕೆಟಿ ಅವರಿಗೆ `ಉತ್ತಮ ಹಿಡಿತಗಾರ~ ಹಾಗೂ ಕೆಎಸ್‌ಪಿ ತಂಡದ ರಮೇಶ್ `ಸರ್ವೋತ್ತಮ ಆಟಗಾರ~ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT