ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ವಿದ್ಯಾಭಾರತಿ ತಂಡದ ಶುಭಾರಂಭ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಧಾರವಾಡ: ವಿದ್ಯಾಭಾರತಿ ತಂಡಗಳು ಸೋಮವಾರ ನಗರದ ಪೊಲೀಸ್ ವಸತಿ ಶಾಲಾ ಕ್ರೀಡಾಂಗಣದಲ್ಲಿ ಆರಂಭವಾದ 57ನೇ ರಾಷ್ಟ್ರೀಯ 17 ವರ್ಷದೊಳಗಿನವರ ಶಾಲಾ ಕಬಡ್ಡಿ ಟೂರ್ನಿಯಲ್ಲಿ ಬಾಲಕ-ಬಾಲಕಿಯರ ವಿಭಾಗಗಳಲ್ಲಿ ಮೊದಲ ಸುತ್ತಿನ ಪಂದ್ಯಗಳನ್ನು ಜಯಿಸುವ ಮೂಲಕ ಶುಭಾರಂಭ ಮಾಡಿದವು.

ಬಾಲಕರ ವಿಭಾಗದಲ್ಲಿ ವಿದ್ಯಾಭಾರತಿ ತಂಡ 35-33 (27-14)ರಿಂದ ಕೇರಳ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು.

ವಿರಾಮದ ವೇಳೆಯಲ್ಲಿ 14-27ರಿಂದ ಹಿಂದಿದ್ದ ಕೇರಳ ತಂಡ, ಉತ್ತರಾರ್ಧದ ಆಟದಲ್ಲಿ ತಿರುಗಿ ಬಿದ್ದಿತಾದರೂ ಅದರ ಹೋರಾಟ ಗೆಲುವಿಗೆ ಸಾಕಾಗಲಿಲ್ಲ.

ಬಾಲಕಿಯರ ವಿಭಾಗದ ಪಂದ್ಯದಲ್ಲಿ ವಿದ್ಯಾಭಾರತಿ ತಂಡ 43-31 ಉತ್ತರಖಂಡ ತಂಡವನ್ನು ಪರಾಭವಗೊಳಿಸಿತು. ವಿರಾಮದ ವೇಳೆಗೆ ವಿದ್ಯಾಭಾರತಿ ತಂಡ 26-14 ಪಾಯಿಂಟ್‌ಗಳಿಂದ ಮುಂದಿತ್ತು.
ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ತಮಿಳುನಾಡು ತಂಡ 45-13 (21-3)ರಿಂದ ಉತ್ತರಖಂಡ ತಂಡದ ಮೇಲೂ; ಮಹಾರಾಷ್ಟ್ರ ತಂಡ 11-9 (7-6)ರಿಂದ ಮಧ್ಯ ಪ್ರದೇಶ ತಂಡದ ವಿರುದ್ಧವೂ; ಹರಿಯಾಣ   ತಂಡ 51-14 (19-9)ರಿಂದ ಚಂಡಿಗಡ ತಂಡದ ಮೇಲೂ ಜಯ ಸಾಧಿಸಿದವು.

ಬಾಲಕಿಯರ ವಿಭಾಗದಲ್ಲಿ ಕೇರಳ ತಂಡ 27-19 (14-12)ರಿಂದ ಚಂಡಿಗಡ ತಂಡವನ್ನು; ಪಂಜಾಬ್ ತಂಡ 34-7 (21-1)ರಿಂದ ಬಿಹಾರ ತಂಡವನ್ನು; ಹರಿಯಾಣ ತಂಡ 26-9 (13-4)ರಿಂದ ಒಡಿಶಾ ತಂಡವನ್ನು ಪರಾಭವಗೊಳಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT