ಚಿಕ್ಕೋಡಿ: ‘ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಹಿತ ಕಾಪಾಡುವ ಉದ್ದೇಶದಿಂದ ಕೇಂದ್ರ ಕೃಷಿ ಸಚಿವ ಶರದ್ ಪವಾರ ನೇತೃತ್ವದ ಸಮಿತಿ ಸಭೆ ಇದೇ 6ರಂದು ದೆಹಲಿಯಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದು, ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾ ರವಾಗುವ ನಿರೀಕ್ಷೆ ಇದೆ’ ಎಂದು ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಹೇಳಿದರು.
‘ಬೆಳೆಗಾರರ ಸಮಸ್ಯೆ ಈ ಸಭೆ ಯಲ್ಲಿ ಸಾಧ್ಯತೆ ಇರುವ ಕಾರಣ 4ರಂದು ನಡೆಸಲು ಉದ್ದೇಶಿಸಿರುವ ಸತ್ಯಾಗ್ರಹ ಕೈಬಿಡಬೇಕು’ ಎಂದು ರೈತ ರಿಗೆ ಸಚಿವರು ಮನವಿ ಮಾಡಿದರು.