ನಮ್ಮ ಪೂರ್ವಜ ನಾಲ್ವಡಿ ರಾಜಾ ವೆಂಕಟಪ್ಪನಾಯಕ್ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದರು. ನಮ್ಮ ಜನಾಂಗ ಸಂಘಟಿತರಾಗುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.
ಬಬ್ಲು ದೊರೆ, ರಾಜು ಧಣಿ ಧರ್ಮರಮಠ ಮುಖ್ಯ ಅತಿಥಿಗಳಾಗಿದ್ದರು. ಹಣಮಂತ್ರಾಯ, ಮಾನಶಯ್ಯ ಗಂಟಿ, ದೇವಿಂದ್ರಪ್ಪ ಹಾಲಗಡ್ಲಿ, ಭೀಮಣ್ಣ ನಾರಾಯಣಪುರ ಉಪಸ್ಥಿತರಿದ್ದರು.ಸಂಘದ ಅಧ್ಯಕ್ಷ ಗೋವಿಂದ ಗಂಟಿ ಸ್ವಾಗತಿಸಿ ನಿರೂಪಿಸಿದರು. ಉಪಾಧ್ಯಕ್ಷ ಗೋಪಾಲನಾಯಕ ಜಾಗೀರದಾರ ವಂದಿಸಿದರು.