ಚೆನ್ನೈ (ಪಿಟಿಐ): ನೀರಾ ರಾಡಿಯಾ ಜತೆ ಸಂಪರ್ಕ ಹೊಂದಿದ್ದ ತಮಿಳುನಾಡು ಸಿಎಂ ಎಂ.ಕರುಣಾನಿಧಿ ಹಾಗೂ ಅವರ ಕುಟುಂಬದ ಸದಸ್ಯರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದರೆ ಮಾತ್ರ 2 ಜಿ ಹಗರಣದ ಬಗ್ಗೆ ನಿಖರ ಮಾಹಿತಿಗಳು ಲಭ್ಯವಾಗಲಿವೆ ಎಂದು ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಹೇಳಿದ್ದಾರೆ.
ರಾಡಿಯಾ ಜತೆ ಕರುಣಾನಿಧಿ ಅವರಿಗಷ್ಟೇ ಅಲ್ಲದೇ, ಅವರ ಪುತ್ರಿ ಕನಿಮೊಳಿ ಮತ್ತು ಪತ್ನಿ ರಜತಿ ಅವರಿಗೂ ಗಾಢ ಸಂಪರ್ಕವಿತ್ತು. ಹೀಗಾಗಿ ಈ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಬೇಕು. ರಾಷ್ಟ್ರದಲ್ಲಿ ಏನಾಗುತ್ತಿದೆ ಎಂಬುದನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಈ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.