ಚೆನ್ನೈ, (ಪಿಟಿಐ): ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು 88 ನೇ ಹುಟ್ಟುಹಬ್ಬವನ್ನು ಶುಕ್ರವಾರ ಸರಳವಾಗಿ ಆಚರಿಸಿಕೊಂಡರು.`ಕೆಟ್ಟವರೊಂದಿಗಿನ ಗೆಳೆತನ ತೊಂದರೆಗೆ ಕಾರಣ~ ಎಂದು ಕಾರ್ಯಕರ್ತರಿಗೆ ನೀಡಿರುವ ಸಂದೇಶದಲ್ಲಿ ತಿಳಿಸಿದ್ದಾರೆ.
``ಸಾಮಾಜಿಕ ಮತ್ತು ರಾಜಕೀಯ ಜಾಗೃತಿಗಾಗಿ ತಮ್ಮನ್ನೇ ಸಮರ್ಪಿಸಿಕೊಂಡವರು `ಕೆಟ್ಟವರೊಂದಿಗಿನ ಗೆಳೆತನ ತೊಂದರೆಯಲ್ಲಿ ಕೊನೆಯಾಗುತ್ತದೆ~ ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಂಡು ಮುಂದಕ್ಕೆ ಹೋಗಬೇಕು~~ ಎಂದು ಕರುಣಾನಿಧಿ ವರದಿಗಾರರಿಗೆ ತಿಳಿಸಿದರು.
ಸಾಮಾನ್ಯವಾಗಿ ಕರುಣಾನಿಧಿ ಅವರು ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರಲ್ಲದೆ ಹುಟ್ಟುಹಬ್ಬದ ಸಮಾರಂಭವು ಪಕ್ಷದ ಬಲಪ್ರದರ್ಶನದ ವೇದಿಕೆಯಂತೆ ಕಂಡುಬರುತ್ತಿತ್ತು.
2 ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ಕರುಣಾನಿಧಿ ಅವರ ಪುತ್ರಿ ಕನಿಮೊಳಿ ಮತ್ತು ಪಕ್ಷದ ಆಪ್ತ ಸದಸ್ಯ ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಅವರು ತಿಹಾರ್ ಜೈಲಿನಲ್ಲಿರುವ ಕಾರಣ ಕರುಣಾನಿಧಿ ಅವರು ಹುಟ್ಟುಹಬ್ಬಕ್ಕೆ ಮಹತ್ವ ನೀಡಲಿಲ್ಲ.