ನವದೆಹಲಿ(ಪಿಟಿಐ): ಕರ್ನಾಟಕ ಮತ್ತು ಜಾರ್ಖಂಡ್ನಲ್ಲಿನ ಉದ್ದೇಶಿತ 1800 ಕೋಟಿ ಡಾಲರ್(ರೂ108000 ಕೋಟಿ) ಹೂಡಿಕೆಯ ಉಕ್ಕು ಘಟಕ ಆರಂಭ ಪ್ರಕ್ರಿಯೆ ಸಮಾಧಾನಕರವಾಗಿಯೇನೂ ಇಲ್ಲ ಎಂದು `ಆರ್ಸೆಲರ್ ಮಿತ್ತಲ್' ಕಂಪೆನಿ ಅಧ್ಯಕ್ಷ ಲಕ್ಷ್ಮಿ ಮಿತ್ತಲ್ ಹೇಳಿದರು.
ಇಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತಿದ್ದ ಅವರು, ಎರಡೂ ರಾಜ್ಯಗಳಲ್ಲಿ ಉಕ್ಕು ಘಟಕ ಸ್ಥಾಪನೆಗೆ ಸಂಬಂಧಿಸಿ ಭೂಸ್ವಾಧೀನ, ಸರ್ಕಾರದ ಸ್ಪಂದನೆ ಮೊದಲಾದ ಅಂಶಗಳನ್ನು ಗಮನಿಸುತ್ತಿದ್ದೇವೆ.