ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಂದ್

Last Updated 23 ಜನವರಿ 2011, 19:30 IST
ಅಕ್ಷರ ಗಾತ್ರ

ಸಿಕ್ಕಾಪಟ್ಟೆ ಸಿಕ್ಕಾಪಟ್ಟೆ
ಜೋರಾಗಿತ್ತು ಬಂದ್ ಗಲಾಟೆ
ಬೇಕಿತ್ತಾ ಸರ್ಕಾರಕ್ಕೆ
ಶಾಂತಿ ಕದಡುವ ಈ ಭರಾಟೆ
ಮೊಕದ್ದಮೆಯ
ಅಡಕತ್ತರಿಯಿಂದ
ಸಿಎಂಗೆ ಭಂಗ
ರಾಜಕೀಯ ಯುದ್ಧ
ಆರಂಭ ಸೂಪರ್ರೋ ರಂಗ...
ದಿನಸಿ, ಪೆಟ್ರೋಲ್, ಕರೆಂಟ್
ತುಟ್ಟಿಯ ಹಾಹಾಕಾರ
ರಾಜ್ಯ ಲೂಟಿಯಾದರೂ
ಜನಪ್ರತಿನಿಧಿಗಳ ತಾತ್ಸಾರ
ನಾಗರಿಕ ಆಸ್ತಿ
ಧ್ವಂಸವಾಗುತ್ತಿದ್ದರೂ
ನಿಲ್ಲದ ಆರ್ಭಟ
ಬಂದ್ ನೆಪದಲ್ಲೇ
ಬೇಳೆ ಬೇಯಿಸಿಕೊಳ್ಳುವ
ತಾಕಲಾಟ ಹಂಸಕ್ಷೀರ ನ್ಯಾಯದ
ಈ ಪರಿ,
ಕೆಲವರಿಗಂತು ಕಣ್ಣುರಿ
ದಿಢೀರ್ ಬದಲಾವಣೆಯಿಂದ
ಶ್ರೀಸಾಮಾನ್ಯನಿಗೆ ಕಿರಿಕಿರಿ
ಅಧಿಕಾರ ದುರುಪಯೋಗದಿಂದ
ನೀತಿಗಳೆಲ್ಲವೂ ಗೌಣ 
ಪ್ರಜೆ ಜಾಗೃತನಾದರೆ ಮಾತ್ರ
ಆದರ್ಶ ರಾಜ್ಯ ನಿರ್ಮಾಣ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT