ಲಖನೌ (ಪಿಟಿಐ): ಕರ್ನಾಟಕ ಮೂಲದ ರೌಡಿಯೊಬ್ಬನ ನಿಕಟ ಸಹಚರನನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕ್ರಿಯಾ ಪಡೆ ಶುಕ್ರವಾರ ಬಂಧಿಸಿದೆ.
ಭೂಗತ ದೊರೆ ರಾಜಾ ಬೊನಾಂಜಾನ ನಿಕಟವರ್ತಿಯಾಗಿರುವ ಜಾವೇದ್ ಅಲಿಯಾಸ್ ಅಜಯ್ನನ್ನು ಇಲ್ಲಿನ ಗೋಮತಿ ನಗರ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾರಾಣಸಿ ನಿವಾಸಿ ಜಾವೇದ್ನನ್ನು ಮಂಗಳೂರು ಪೊಲೀಸರ ಮನವಿ ಮೇರೆಗೆ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಬ್ರಿಜ್ಲಾಲ್ ತಿಳಿಸಿದ್ದಾರೆ.