ಬೆಂಗಳೂರು: ಗಣೇಶ್ ಸತೀಶ್ (90) ಹಾಗೂ ಅಮಿತ್ ವರ್ಮ (85) ಅವರ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ಕೆ.ಎಸ್.ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿ ತಮ್ಮ ಎರಡನೇ ಪಂದ್ಯದಲ್ಲಿ ಕೇರಳ ವಿರುದ್ಧ 38 ರನ್ಗಳಿಂದ ಗೆಲುವು ಸಾಧಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 49.5 ಓವರ್ಗಳಲ್ಲಿ 315 (ಗಣೇಶ್ ಸತೀಶ್ 90, ಅಮಿತ್ ವರ್ಮ 85, ಅಭಿಮನ್ಯು ಮಿಥುನ್ 34, ಸ್ಟುವರ್ಟ್ ಬಿನ್ನಿ 36; ಮನು ಕೃಷ್ಣನ್ 56ಕ್ಕೆ2); ಕೇರಳ: 45.5 ಓವರ್ಗಳಲ್ಲಿ 277 (ಜಗದೀಶ್ 23, ರೋಹನ್ ಪ್ರೇಮ್ 114, ಸಚಿನ್ ಬೇಬಿ 34, ಕೆ.ಜೆ.ರಾಕೇಶ್ 34, ಪಿ.ಪ್ರಶಾಂತ್ 34; ಅಭಿಮನ್ಯು ಮಿಥುನ್ 40ಕ್ಕೆ2, ಸ್ಟುವರ್ಟ್ ಬಿನ್ನಿ 69ಕ್ಕೆ2): ಫಲಿತಾಂಶ: ಕರ್ನಾಟಕಕ್ಕೆ 38 ರನ್ಗಳ ಜಯ.