ಶ್ರೀನಗರ (ಪಿಟಿಐ): ಸಂವಿಧಾನದ ಕಲಂ 370ರ ಬಗ್ಗೆ ಚರ್ಚೆ ನಡೆಸಲು ‘ಯಾವತ್ತೂ’, ‘ಎಲ್ಲಿಯಾದರೂ’ ಸಿದ್ಧನಿದ್ದೇನೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಮರು ಸವಾಲು ಹಾಕಿದ್ದಾರೆ.
‘ಕಲಂ 370ರ ಬಗ್ಗೆ ಅವರು ಚರ್ಚೆ ನಡೆಸಬೇಕು ಎಂದು ಬಯಸಿದ್ದಲ್ಲಿ. ಎಲ್ಲಿ ಮತ್ತು ಯಾವಾಗ ಚರ್ಚೆ ನಡೆಸಬೇಕು ಎನ್ನುವುದು ಹೇಳಲಿ. ಅಹಮದಬಾದ್ನಲ್ಲಿ ಚರ್ಚೆ ಆಯೋಜಿಸಿದ್ದರೂ ನಾನು ಸಿದ್ಧನಿದ್ದೇನೆ’ ಎಂದು ಸಾರ್ವಜನಿಕ ಸಭೆಯಲ್ಲಿ ಒಮರ್ ಹೇಳಿದರು.
‘ಜಮ್ಮು ಮತ್ತು ಕಾಶ್ಮೀರದ ಗೊತ್ತಿಲ್ಲದವರು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾತನಾಡುತ್ತಿದ್ದಾರೆ. ಕಲಂ 370 ಬಗ್ಗೆ ಅರಿವಿಲ್ಲದೇ ಇದ್ದವರು ಅದರ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಅವರು ಟೀಕಿಸಿದರು.