ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೋತ್ಸವ ಮಕ್ಕಳ ಪ್ರತಿಭೆಗೆ ವೇದಿಕೆ

Last Updated 10 ಜನವರಿ 2014, 6:21 IST
ಅಕ್ಷರ ಗಾತ್ರ

ಕೆಜಿಎಫ್‌: ಮಕ್ಕಳಲ್ಲಿ ಅಡಗಿರುವ ಪರಿಪೂರ್ಣತೆ ಅಭಿವ್ಯಕ್ತಿಯಾಗಬೇಕು. ಪಠ್ಯಕ್ರಮದಲ್ಲಿರುವ ಪಾಠಗಳನ್ನು ಓರೆಗಚ್ಚಿ ನೋಡುವ ವೇದಿಕೆ ಮಕ್ಕಳಿಗೆ ಸಿಗಬೇಕು. ಮೂವತ್ತೊಂದು ವಿಷಯಗಳ ಕಲಿಕೋತ್ಸವ ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ವೇದಿಕೆ ಎಂದು ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಬಿ.ಜಿ.ನಾರಾಯಣಸ್ವಾಮಿ ತಿಳಿಸಿದರು.

ಬೆಮಲ್‌ ನಗರದಲ್ಲಿ ಗುರುವಾರ ನಡೆದ ಕಲಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರ ಸಂಪನ್ಮೂಲ ಅಧಿಕಾರಿ ನಾಗ­ರಾಜಾಚಾರಿ ಮಾತನಾಡಿ, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ನಡೆಸಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದರು.

ನಗರಸಭೆ ಸದಸ್ಯೆ ಉಮಾ, ಪ್ರಾಂಶು­ಪಾಲ ಸುಬ್ರಹ್ಮಣಿ ಮಾತನಾಡಿದರು. 360 ವಿದ್ಯಾರ್ಥಿಗಳು ವಿವಿಧ ಕಲೆಗಳ ಪ್ರದರ್ಶನ ಮಾಡಿದರು.

ಶಿಕ್ಷಣ ಇಲಾಖೆ ಅಧಿಕಾರಿಗಳಾದ ಮಂಜುನಾಥಾಚಾರಿ, ರುಕ್ಮಿಣಮ್ಮ, ಸ್ಟೆಲ್ಲಾ, ಗೋವಿಂದರಾಜು, ನಾಟೀಕರ್‌, ನಾರಾಯಣಸ್ವಾಮಿ, ಹೇಮಂತ್‌­ಕುಮಾರ್‌ ಹಾಜರಿದ್ದರು. ಶ್ರೀದೇವಿ ಸ್ವಾಗತಿಸಿದರು. ಶಶಿಧರ್‌ ವಂದಿಸಿದರು. ಶ್ರೀನಿವಾಸ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT