ನವದೆಹಲಿ (ಪಿಟಿಐ): ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕ್ರೀಡಾ ಆಡಳಿತಗಾರ ಸುರೇಶ್ ಕಲ್ಮಾಡಿ, ವಿ.ಕೆ.ವರ್ಮ ಹಾಗೂ ಲಲಿತ್ ಭಾನೋಟ್ ಅವರನ್ನು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಶೀಘ್ರವೇ ಅಮಾನತುಗೊಳಿಸಿ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿಂತಿ ಸಂಹಿತೆ ಆಯೋಗ ಸೂಚಿಸಿದೆ.