ಬೆಳಗಾವಿ: ನಗರದಲ್ಲಿ ಜನವರಿ 11ರ ನಂತರ ಮದುವೆ ಹಾಗೂ ಸಮಾರಂ ಭಗಳನ್ನು ನಡೆಸಲು ಕಲ್ಯಾಣ ಮಂಟಪ ಕಾಯ್ದಿರಿಸಿದ್ದರೆ, ಈಗಲೇ ಎಚ್ಚೆತ್ತು ಕೊಳ್ಳಿ! ಕಾರ್ಯಕ್ರಮ ನಡೆಸಲೆಂದು ನೀವು ನಿಗದಿತ ದಿನದಂದು ಕಲ್ಯಾಣ ಮಂಟಪ ಅಥವಾ ಸಭಾಭವನಗಳಿಗೆ ಬಂದರೆ, ಕಾನೂನು ಬಾಹಿರವಾಗಿ ನಡೆಸುತ್ತಿರುವ ಅವುಗಳಿಗೆ ಬೀಗ ಮುದ್ರೆ ಹಾಕಿರುವುದನ್ನು ಕಂಡು ನಿಮಗೆ ಆಘಾತ ಆಗಬಹುದು.
ಹೌದು, ನಗರದಲ್ಲಿರುವ 101 ಕಲ್ಯಾಣ ಮಂಟಪ/ ಸಭಾಭವನಗಳು ಪರವಾನಗಿ ಪಡೆಯದೇ, ತೆರಿಗೆ ಪಾವತಿಸದೇ ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವುಗಳಿಗೆ ಬೀಗಮುದ್ರೆ ಹಾಕಲು ಬೆಳಗಾವಿ ಮಹಾನಗರ ಪಾಲಿಕೆಯು ನಿರ್ಧರಿಸಿದೆ.
ಅಗತ್ಯ ಪರವಾನಗಿ ಪಡೆದು, ತೆರಿಗೆ ಪಾವತಿಸುವಂತೆ ಕಲ್ಯಾಣ ಮಂಟಪಗಳ ಆಡಳಿತ ಮಂಡಳಿಗಳಿಗೆ ಪಾಲಿಕೆಯ ಅಧಿಕಾರಿಗಳು ಕಳೆದ ಮೂರು ವರ್ಷ ಗಳಿಂದ ಮನವಿ ಮಾಡುತ್ತಿದ್ದರೂ ಸ್ಪಂದಿಸಿಲ್ಲ. ಕುಡಿಯುವ ನೀರು, ನೈರ್ಮಲ್ಯ, ವಾಹನ ನಿಲುಗಡೆಗೆ ಸ್ಥಳಾ ವಕಾಶವನ್ನು ಸಮರ್ಪಕವಾಗಿ ನೀಡದಿ ದ್ದರೂ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗಾಗಿ ಜನರಿಂದ ಭಾರಿ ಪ್ರಮಾಣದ ಶುಲ್ಕವನ್ನು ಇವು ಪಡೆಯುತ್ತಿದ್ದವು.
ಆಡಳಿತ ಮಂಡಳಿಯವರ ಬೇಡಿಕೆ ಯಂತೆ ಪಾಲಿಕೆಯು ನಗರದ ಕಲ್ಯಾಣ ಮಂಟಪಗಳನ್ನು ಎ, ಬಿ ಹಾಗೂ ಸಿ ವಿಭಾಗಗಳಲ್ಲಿ ವಿಂಗಡಿಸಿದ್ದು, ಪರ ವಾನಗಿ ಪಡೆದುಕೊಳ್ಳುವಂತೆ ಸೂಚಿಸಿತ್ತು. ಆದರೆ, ಆಡಳಿತ ಮಂಡಳಿ ಯವರು ಇದಕ್ಕೆ ಕ್ಯಾರೇ ಎನ್ನಲಿಲ್ಲ. ಪರವಾನಗಿ ಹಾಗೂ ತೆರಿಗೆ ಪಾವತಿ ಸಲು ಕಳೆದ ನವೆಂಬರ್ ತಿಂಗಳಿನಲ್ಲಿ ಪಾಲಿಕೆಯಲ್ಲಿ ಏಕಗವಾಕ್ಷಿ ಸೇವಾ ಕೇಂದ್ರ ಆರಂಭಿಸಿದ್ದರೂ ಯಾರೂ ಮುಂದೆ ಬಾರದೇ ಇರುವುದರಿಂದ ಪಾಲಿಕೆಯು ಇದೀಗ ಕಠಿಣ ಕ್ರಮಕ್ಕೆ ಮುಂದಾಗಲು ನಿರ್ಧರಿಸಿದೆ.
‘ಪರವಾನಗಿ ಪಡೆದುಕೊಳ್ಳುವಂತೆ ಕಲ್ಯಾಣ ಮಂಟಪಗಳಿಗೆ ಈಗಾಗಲೇ ನಾವು ಬಹಳ ಕಾಲಾವಕಾಶ ನೀಡಿ ದ್ದೇವೆ. ಹೀಗಿದ್ದರೂ ಯಾರೂ ಇದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಜನವರಿ 11ರ ನಂತರ ಕಲ್ಯಾಣ ಮಂಟಪ ಹಾಗೂ ಸಭಾಗೃಹಗಳಿಗೆ ಬೀಗಮುದ್ರೆ ಹಾಕಲಾ ಗುವುದು. ಯಾರು ಪರವಾನಿಗೆ ಪಡೆದು ತೆರಿಗೆ ಪಾವತಿಸುತ್ತಾರೋ, ಅಂಥವರಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾ ಗುವುದು’ ಎಂದು ಮಹಾನಗರ ಪಾಲಿಕೆಯ ಆರೋಗ್ಯಾ ಧಿಕಾರಿ ಡಾ. ಸತೀಶ ಪೋತದಾರ ತಿಳಿಸಿದರು.
‘ಕಲ್ಯಾಣ ಮಂಟಪದವರಿಗೆ ಮೊದ ಲಿಗೆ ಕಳೆದ ಮೂರು ವರ್ಷಗಳ ಕರವನ್ನು ಪಾವತಿಸಿ, ಬಾಕಿ ಯನ್ನು ಆ ನಂತರ ಪಾವತಿಸುವಂತೆ ಸೂಚಿ ಸಲಾ ಗಿತ್ತು. ಆದರೆ, ಪಾಲಿಕೆಯ ಮಾಜಿ ಸದಸ್ಯ ರೊಬ್ಬರು ಆಡಳಿತ ಮಂಡಳಿ ಯವರನ್ನು ದಾರಿ ತಪ್ಪಿಸುತ್ತಿದ್ದಾರೆ. ಏನೇ ಇರಲಿ, ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಗರದಲ್ಲಿರುವ 101 ಕಲ್ಯಾಣ ಮಂಟಪ/ ಸಭಾಗೃಹಗಳ ಪೈಕಿ ಯಾವುದೂ ಪರವಾನಿಗೆ ಪಡೆದುಕೊಂಡಿಲ್ಲ. ಹೀಗಾಗಿ ಅವುಗಳಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡುವುದಿಲ್ಲ. ಹೀಗಾಗಿ ಪರವಾನಿಗೆ ಪಡೆದುಕೊಳ್ಳದ ಕಲ್ಯಾಣ ಮಂಟಪಗಳಲ್ಲಿ ಸಭೆ–ಸಮಾರಂಭಗಳನ್ನು ಸಾರ್ವಜನಿಕರೂ ಇಟ್ಟುಕೊಳ್ಳ ಬಾರದು’ ಎಂದು ಪೋತದಾರ ತಿಳಿಸಿದರು.
ನಗರದಲ್ಲಿರುವ 101 ಕಲ್ಯಾಣ ಮಂಟಪ/ ಸಭಾಗೃಹಗಳು ಅಧಿಕೃತವಾಗಿ ಪರವಾನಿಗೆ ಪಡೆದು ಕೊಂಡರೆ ಅದರಿಂದ ಮಹಾನಗರ ಪಾಲಿಕೆಗೆ ಕನಿಷ್ಠ ರೂ.20 ಲಕ್ಷ ಆದಾಯ ಲಭಿಸಲಿದೆ. ಜೊತೆಗೆ ಇವು ಕಳೆದ ಮೂರು ವರ್ಷಗಳ ಬಾಕಿ ಕರವನ್ನು ಪಾವತಿಸಿದರೆ ರೂ.1 ಕೋಟಿಯಷ್ಟು ಆದಾಯ ಪಾಲಿಕೆಗೆ ಲಭಿಸಬಹುದು ಎಂದು ಅಂದಾಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.