ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ:ಯಯಾತಿಯ ಇತ್ತ ಕಳುಹಿ

Last Updated 2 ಜೂನ್ 2012, 19:30 IST
ಅಕ್ಷರ ಗಾತ್ರ

ಕನಸ ಕಗ್ಗಾಡಿನಲ್ಲಿಯೂ ನಾ
ತೆನೆತುಂಬಿ ಕಂಗೊಳಿಪ ಮಾಮರ

ಕೆಂದಳಿರು ತಂಬೆಲರು
ಸೋನೆಮಿಡಿ ಸಿಹಿಗಾಯಿ
ಜೀರುಂಡೆ ಗಿಳಿವಿಂಡು
ಗೂಡು ನೂರಾ ಒಂದು
ಎಲ್ಲ ಸರಿ! ಸಾಲದು ಕಣೆ
ಚಿತ್ತಾಪಹಾರಿ ಮಾವೆ!
ಮಾಗು... ಮಾಗು... ಮಾಗು...

ನೆಟ್ಟು ನೀರೆರೆದವರ ತಲೆ
ಹತ್ತಿರ ಹತ್ತಿರ ನೂರಾಎಂಟು ಡಿಗ್ರಿ
ತುಡುಗುದನ ಪಿಂಜಾರುಪೋಲಿ
ಬೇಲಿದಾಟಿಯು ಬಂದು
ಜೋತು ಬೀಳುತ್ತಲ್ಲ,
ಹಾಳಾದ ಬಾವಲಿ!
ಅದು ಬೆಳಕ ಬಿಂದು
ಸೆರಗಸುಡುವ ಕಿಡಿಯಾಗುವ ಕ್ಷಣ.

ಕನಸುಗಳ ಕಣ್ಣೆವೆಯೊಳಗೇ
ಬಚ್ಚಿಟ್ಟು ಹೇಳುತ್ತಿದ್ದೇನೆ
ಯಯಾತಿ ಏನಾದರೂ ಅತ್ತ
ಬಂದರೆ
ಕೊಟ್ಟು ಕಳುಹಿ ನನ್ನ ವಿಳಾಸ
ನಾನವನನ್ನು ಖಂಡಿತ
ನಿರಾಸೆಗೊಳಿಸಲಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT