ಸಮೀಪದ ಮರ್ಲಾನಹಳ್ಳಿಯಲ್ಲಿ ಅಭಿಮಾನಿಗಳಿಂದ ಬುಧವಾರ ಅದ್ದೂರಿ ಸ್ವಾಗತದ ಬಳಿಕ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೀಕರ ಬರಗಾಲವಿದೆ. ಜನರು ಗುಳೆ ಹೋಗುತ್ತಿದ್ದಾರೆ. ಜನ, ಜಾನುವಾರುಗಳಿಗೆ ನೀರು, ಮೇವು ಇಲ್ಲ. ಸರ್ಕಾರ ಕೇಂದ್ರದ ಕಡೆ ಬೊಟ್ಟು ಮಾಡಿದರೆ ಸಂಕಷ್ಟಗಳು ಬಗೆಹರಿಯುವುದಿಲ್ಲ. ಲಕ್ಷ ರೂಪಾಯಿ ಬಜೆಟ್ನಲ್ಲಿ ಶೇಕಡಾ 5ರಷ್ಟು ಬರ ಪರಿಹಾರಕ್ಕೆ ಬಳಸಿದ್ದರೆ, ಪಾದಯಾತ್ರೆಯ ಅವಶ್ಯಕತೆ ಇರಲಿಲ್ಲ ಎಂದರು.