ಬಿಳಿ ಕುರ್ತಾ ತೊಟ್ಟ ಗಡ್ಡಧಾರಿ ಕಸಾಬ್ನೊಂದಿಗೆ ವಿಡಿಯೊ ಕಾನ್ಪರೆನ್ಸ್ನಲ್ಲಿ ಮಾತನಾಡಿದ ನ್ಯಾಯಮೂರ್ತಿ ದೇಸಾಯಿ ’ನಿಮ್ಮ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿಯಲಾಗಿದೆ, ನೀವು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಬಹುದು’ ಎಂದು ಹೇಳಿದರು. 2008ರ ನವೆಂಬರ್26 ರಂದು ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಜೀವಂತ ಸೆರೆಹಿಡಯಲಾದ 24 ವಯಸ್ಸಿನ ಉಗ್ರ ಕಸಾಬ್ನಿಗೆ ಕಳೆದ ವರ್ಷ ಮೇ 6 ರಂದು ವಿಚಾರಣಾ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಕಸಾಬ್ ಪರ ವಕೀಲರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಒಂಬತ್ತು ತಿಂಗಳ ವಿಚಾರಣೆ ನಂತರ ಕೆಳನ್ಯಾಯಾಲಯದ ಶಿಕ್ಷೆಯನ್ನು ಹೈಕೋರ್ಟ್ ಧೃಢೀಕರಿಸಿದೆ. ಕಸಾಬ್ನ ಮೇಲೆ ಹಲವು ಕೊಲೆ ಆರೋಪ ಒಳಗೊಂಡಂತೆ ರಾಷ್ಟ್ರದ ವಿರುದ್ಧ ಸಂಚು ಮತ್ತು ಯುದ್ಧ ನಡೆಸಿದ ಆರೋಪಗಳಿವೆ.