ದಾಂಡೇಲಿ: ಇಲ್ಲಿಯ ಗಾಂಧೀ ನಗರ ಪ್ರದೇಶದಲ್ಲಿ ಕಸಾಯಿಖಾನೆಯನ್ನು ನಿರ್ಮಿಸುವುದು ಬೇಡ ಎಂದು ವಿವಿಧ ಸಂಘಟನೆಗಳು ಇಲ್ಲಿಗೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಪುಷ್ಪಲತಾ ಅವರ ಎದುರು ಪ್ರತಿಭಟನೆ ನಡೆಸಿ ಲಿಖಿತ ಮನವಿ ಅರ್ಪಿಸಿದವು.
ಕಸಾಯಿಖಾನೆಯನ್ನು ಸ್ಥಾಪಿಸುವ ಕುರಿತು ದಶಕಗಳ ಹಿಂದೆಯೇ ದಾಂಡೇಲಿಯಲ್ಲಿ ಚರ್ಚೆಯಾಗಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಇದೀಗ ಮತ್ತೆ ಈ ವಿಷಯವನ್ನು ಪ್ರಾಸ್ತಾಪಕ್ಕೆ ತಂದಿದ್ದರಿಂದ ದಾಂಡೇಲಿಯ ಬಹುಸಂಖ್ಯಾತ ಜನರ ಭಾವನೆಯನ್ನು ಘಾಸಿಗೊಳಿಸಿದಂತಾಗಿದೆ. ದಾಂಡೇಲಿಯಲ್ಲಿ ದೇಶದ ಎಲ್ಲ ಪ್ರದೇಶದ ಜನರು ವಾಸಿಸುತ್ತಿದ್ದು, ಗೋವುಗಳನ್ನು ಹಾಗೂ ದನಕರುಗಳನ್ನು ಧಾರ್ಮಿಕ ಭಾವನೆಯ ಹಿನ್ನೆಲೆಯಲ್ಲಿ ಪೂಜನೀಯವಾಗಿ ಕಾಣುತ್ತಿದ್ದಾರೆ.