ಬೆಂಗಳೂರು: ಕಾಂಗ್ರೆಸ್ ಮುಖಂಡ ಎಂ.ಪಿ.ಪ್ರಕಾಶ್ ನಿಧನ ಹಿನ್ನೆಲೆಯಲ್ಲಿ ಗುರುವಾರ ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ನಾಡರಕ್ಷಣಾ ರ್ಯಾಲಿಯನ್ನು ಮುಂದೂಡಲಾಗಿದೆ. ಪಕ್ಷದ ಮುಖಂಡರು ಪ್ರಕಾಶ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತೆರಳಿರುವುದರಿಂದ ರ್ಯಾಲಿಯನ್ನು ಮುಂದೂಡಿದ್ದು, ರ್ಯಾಲಿಯ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದಿದ್ದಾರೆ.ಉಳಿದಂತೆ ಗುಲ್ಬರ್ಗದಲ್ಲಿ ಫೆ.13 ಮತ್ತು ಮೈಸೂರಿನಲ್ಲಿ ಫೆ.20ರಂದು ರ್ಯಾಲಿಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.