ನವದೆಹಲಿ(ಪಿಟಿಐ): ಎರಡು ದಿನಗಳ ಕಾಂಗ್ರೆಸ್ ಮಾಧ್ಯಮ ಶೃಂಗಸಭೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಲ್ಲಿ ಚಾಲನೆ ನೀಡಿದರು.
ಉದ್ಘಾಟನಾ ಭಾಷಣ ಮಾಡಿದ ರಾಹುಲ್, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂವಹನ ಕಾರ್ಯತಂತ್ರ ಹಾಗೂ ಚೌಕಟ್ಟನ್ನು ಸಾಂಸ್ಥೀಕರಿಸುವ ಬಗ್ಗೆ ಒತ್ತು ನೀಡಬೇಕು ಎಂದು ಹೇಳಿದರು.
ವೈಯಕ್ತಿಕ ವರ್ಚಸ್ಸು ಹೆಚ್ಚಿದರೆ ಪಕ್ಷದ ವರ್ಚಸ್ಸು ತಾನೇತಾನಾಗಿ ಉತ್ತಮವಾಗಲಿದೆ. ಆದ್ದರಿಂದ ನೇತಾರರು ಸಕಾರಾತ್ಮಕ ರಾಜಕೀಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.