ಕಾಕ ರಾಜ, ತನ್ನ ರಾಣಿಯೊಂದಿಗೆ ಜಲವಿಹಾರಕ್ಕೆಂದು ಬಂದಾಗ, ಉಳಿದ ಹಕ್ಕಿಗಳು ಆ ಬೊಗಸೆಯಗಲದ ಕೊಳದಲ್ಲಿ ಇಳಿಯುವಂತಿಲ್ಲ, ತಮ್ಮ ಸರದಿಗಾಗಿ ಒಂಟಿಗಾಲಲ್ಲಿ ನಿಂತು ಕಾದ ಪಾರಿವಾಳ, ಮೈನಾಗಳು ಕೊನೆಗೊಮ್ಮೆ ತಾವೂ ನೀರಿಗಿಳಿದವು. ವಿಧಾನಸೌಧದ ಹಿಂದಿರುವ ಹುಲ್ಲುಹಾಸಿನ ನಡುವೆ ಸುಮಾರು ಒಂದು ತಾಸು ನಡೆದ ಹಕ್ಕಿಗಳ ಜಲಕೇಳಿಯನ್ನು ಸೆರೆಹಿಡಿದವರು ವಿಶ್ವನಾಥ ಸುವರ್ಣ.