ಮುಂಬೈ/ ಕೋಲ್ಕತ್ತ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ಉದ್ಭವಿಸಿರುವ ಬಿಕ್ಕಟ್ಟಿಗೆ ಸದ್ಯದಲ್ಲಿ ಪರಿಹಾರ ದೊರೆಯುವ ಲಕ್ಷಣಗಳು ಕಾಣುತ್ತಿಲ್ಲ.
`ಸಂಜಯ್ ಜಗದಾಳೆ ರಾಜೀನಾಮೆ ವಾಪಸ್ ಪಡೆಯಲು ನಿರಾಕರಿಸಿದ್ದಾರೆ. ಅಜಯ್ ಶಿರ್ಕೆ ನಿರ್ಧಾರ ಬದಲಿಸುವರೇ ಎಂದು ಮತ್ತೆ 24 ಗಂಟೆ ಕಾಯಲು ಮಂಡಳಿ ತೀರ್ಮಾನಿಸಿದೆ' ಎಂದು ಬಿಸಿಸಿಐ `ಹಂಗಾಮಿ ಅಧ್ಯಕ್ಷ' ಜಗಮೋಹನ್ ದಾಲ್ಮಿಯ ತಿಳಿಸಿದ್ದಾರೆ.
`ಈಗ ತಲೆದೋರಿರುವ ಬಿಕ್ಕಟ್ಟಿಗೆ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ. ಆದರೆ ನನಗೆ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
ಮೇಯಪ್ಪನ್, ವಿಂದುಗೆ ನ್ಯಾಯಾಂಗ ಬಂಧನ: ಐಪಿಎಲ್ನಲ್ಲಿ ನಡೆದ ಬೆಟ್ಟಿಂಗ್ನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಗುರುನಾಥ್ ಮೇಯಪ್ಪನ್ ಮತ್ತು ವಿಂದು ರಾಂಧವ ಅವರಿಗೆ ಜೂನ್ 14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇಬ್ಬರ ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ.