ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಪ್ರವೇಶ ಪರೀಕ್ಷೆ: ಆಶ್ವೀಜ್ ಪ್ರಥಮ ರ‌್ಯಾಂಕ್

Last Updated 18 ಮೇ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: ದೇಶದಾದ್ಯಂತ ಈಚೆಗೆ ನಡೆದ ಕಾನೂನು ಪ್ರವೇಶ ಪರೀಕ್ಷೆಯಲ್ಲಿ ನಗರದ ವೈಷ್ಣವಿ ಚೇತನಾ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಆಶ್ವೀಜ್ ಎಸ್. ರಾಮಯ್ಯ ಅವರು ಪ್ರಥಮ ರ‌್ಯಾಂಕ್ ಗಳಿಸಿದ್ದಾರೆ.

ಅವರು ಎಸ್‌ಎಸ್ ಬಡಾವಣೆಯ ಸಿವಿಲ್ ಎಂಜಿನಿಯರ್ ಆರ್. ಸುರೇಶ್-ಶೀಲಾ ದಂಪತಿ ಪುತ್ರ. ~ಐಎಎಸ್ ಕನಸು ಹೊತ್ತು ಐದು ವರ್ಷಗಳ ಕಾನೂನು ಪದವಿ ಸೇರಲು ನಿರ್ಧರಿಸಿದೆ. ದೆಹಲಿಯ ಕಾನೂನು ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು, ಅಲ್ಲೇ ಐಎಎಸ್ ತರಬೇತಿ ಪಡೆಯುವೆ~ ಎನ್ನುತ್ತಾರೆ ಆಶ್ವೀಜ್.

ಅವರನ್ನು ಚೇತನಾ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮೀ ವೀರಮಾಚನೇನಿ, ಪ್ರಾಂಶುಪಾಲ ಪ್ರೊ.ಬಿ.ವಿ. ರಮಣಕುಮಾರ್ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT