ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯು 1982ರಿಂದ ಅನುದಾನ ಸಂಹಿತೆಗೆ ಒಳಪಟ್ಟಿದ್ದು, 2001ರಲ್ಲಿ ವಿಸರ್ಜನೆ ಆಗಿದೆ.
ಇಂದು ಲೋಕ ಶಿಕ್ಷಣ ಇಲಾಖೆ ಅಧೀನದಲ್ಲಿ ಕೆಲಸ ಮಾಡುತ್ತಿದೆ. ದುರಂತ ಎಂದರೆ ಇದರ ಸಿಬ್ಬಂದಿ ವರ್ಗವನ್ನು ಯಾವುದೇ ಮಾನದಂಡ ಇಲ್ಲದೆ ಮನಬಂದಂತೆ ವರ್ಷಗಟ್ಟಲೆ ನಿಯೋಜನೆ ಮಾಡಿ ದೌರ್ಜನ್ಯ ಎಸಗುತ್ತಿದೆ.
ಅಮಾಯಕ ನೌಕರರಿಗೆ ನಿಯೋಜನೆ ಭತ್ಯವನ್ನು ಸಹ ಪಾವತಿಸದೆ ಹಿಂಸೆ ನೀಡಲಾಗುತ್ತಿದೆ.
ಸರ್ಕಾರವು ಇತ್ತ ಗಮನ ನೀಡಿ ಇಂತಹ ಕಾನೂನುಬಾಹಿರ ನಿಯೋಜನೆಗಳನ್ನು ರದ್ದುಪಡಿಸಿ ಸಂವಿಧಾನಬದ್ಧ ರಕ್ಷಣೆ ನೀಡಲು ವಿನಂತಿ.