ಬೆಂಗಳೂರು: ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಕೆಲಕಾಲ ಲಿಫ್ಟ್ ಮಧ್ಯದಲ್ಲೇ ಸ್ಥಗಿತಗೊಂಡು ನಿಂತಿದ್ದರಿಂದ ತುಸು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಘಟನೆ ನಡೆದಾಗ ಕೆಲ ಪ್ರಯಾಣಿಕರು ಲಿಫ್ಟ್ನಲ್ಲಿ ಇದ್ದರು. ತಕ್ಷಣ ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಿಂದ ಬಂದ ತಜ್ಞರು, ದುರಸ್ತಿಗೊಳಿಸಿ ಲಿಫ್ಟ್ ಮೇಲೆ ಬರುವಂತೆ ನೋಡಿಕೊಂಡರು.
`ತಾಂತ್ರಿಕ ದೋಷದಿಂದ ಲಿಫ್ಟ್ ಸ್ಥಗಿತಗೊಂಡಿತ್ತು. ತಕ್ಷಣ ಸರಿಪಡಿಸಲಾಗಿದ್ದು, ಯಾವುದೇ ತೊಂದರೆ ಇಲ್ಲ~ ಎಂದು ಅಧಿಕಾರಿಗಳು ತಿಳಿಸಿದರು.