ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಂತರ ನೆನಪಿನ ನಾಟಕೋತ್ಸವ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಮುಗ್ಧ ಮನಸ್ಸಿನ ಕಾರಂತರು ನೀಡಿದ ಪ್ರೋತ್ಸಾಹದಿಂದಲೇ ರಂಗಭೂಮಿಯಲ್ಲಿ ಹಲವು ಪ್ರತಿಭೆಗಳು ಸೃಷ್ಟಿಯಾಗಿವೆ~ ಎಂದು ಸಂಸದೆ ಬಿ. ಜಯಶ್ರೀ ತಿಳಿಸಿದರು.  ಪ್ರತಿಮಾ ರಂಗಸಂಶೋಧನಾ ಪ್ರತಿಷ್ಠಾನವು ನಗರದ ಸಂಸ ಬಯಲು ರಂಗ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಬಿ.ವಿ.ಕಾರಂತರ ನೆನಪಿನ ನಾಟಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಸಹಜ ಅಭಿನಯ ಮತ್ತು ನಡವಳಿಕೆಯಿಂದಲೇ ಕಾರಂತರು ಕಲಾವಿದರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದರು. ಮಾತು ಸಹಜವಾಗಿದ್ದರೂ ಅರ್ಥಗರ್ಭಿತವಾಗಿರುತ್ತಿತ್ತು. ಹೊಸ ಪ್ರಯೋಗಗಳ ಮೂಲಕ ರಂಗಭೂಮಿಯನ್ನು ಜೀವಂತವಾಗಿರಿಸಿದ ಅದಮ್ಯ ಚೇತನ ಕಾರಂತ~ ಎಂದು ಶ್ಲಾಘಿಸಿದರು.

`ವಿಭಿನ್ನ ಪ್ರಯೋಗಗಳ ಮೂಲಕ ಕಾರಂತರ ನಾಟಕಗಳಿಗಿರುವ ವಿಶೇಷತೆಯನ್ನು ಸಾದರಪಡಿಸಬೇಕಿದ್ದು, ಈ ನಿಟ್ಟಿನಲ್ಲಿ ರಂಗಭೂಮಿ ಕಲಾವಿದರು  ಪ್ರಯತ್ನಿಸೋಣ~ ಎಂದು ಕರೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್. ರಾಮಕೃಷ್ಣ, `ಕಾರಂತರು ಬಳಸುತ್ತಿದ್ದ ರಂಗಪರಿಕರಗಳನ್ನು ಸಂರಕ್ಷಿಸುವ ಅಗತ್ಯವಿದ್ದು, ಈ ದಿಸೆಯಲ್ಲಿ ಕಾರಂತರ ಶಿಷ್ಯವೃಂದ ಮತ್ತು ರಂಗಭೂಮಿ ಕಲಾವಿದರೂ ಯೋಜನೆಯೊಂದನ್ನು ರೂಪಿಸಬೇಕು~ ಎಂದು ಸಲಹೆ ನೀಡಿದರು. ವಿಮರ್ಶಕ ಡಾ. ಕೆ. ಮರುಳಸಿದ್ಧಪ್ಪ, ಲೇಖಕ ಡಾ. ಡಿ.ಕೆ. ಚೌಟ, ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ, ರಂಗನಿರ್ದೇಶಕ ಪ್ರಕಾಶ್ ಬೆಳವಾಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT