ವಿದ್ಯಾರ್ಥಿಯನ್ನು ಪರೀಕ್ಷಿಸಿ, ಚುಚ್ಚುಮದ್ದು ಹಾಕಲು ಚೀಟಿ ನೀಡಿ, ಕಂಪ್ಯೂಟರ್ ರೂಂಗೆ ಹೋಗಿದ್ದೆ. ಅಷ್ಟರಲ್ಲಿ ಗಲಾಟೆಯ ಶಬ್ದ ಕೇಳಿಬಂತು. ಸಿಬ್ಬಂದಿ ಶಿವಪ್ಪ ಹಾಗೂ ಬಂದವರೊಂದಿಗೆ ವಾಗ್ವಾದ ನಡೆದಿತ್ತು. ಉಭಯತರನ್ನು ಸಮಾಧಾನ ಮಾಡಿ, ಸಿಬ್ಬಂದಿ ಶಿವಪ್ಪಗೆ ನಡತೆ ತಿದ್ದಿಕೊಳ್ಳುವಂತೆ ಎಚ್ಚರಿಕೆ ನೀಡಿರುವೆ. ಬಿಪಿಎಲ್ ಕಾರ್ಡ್ ಇದ್ದರೆ ಹಣ ಬೇಕಿಲ್ಲ, ಇಲ್ಲದಿದ್ದರೆ ರೂ. 100 ಪಾವತಿಸಬೇಕಾಗುತ್ತದೆ. ರಸೀದಿ ನೀಡಲಾಗುತ್ತದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಕಾವೇರಿ ಶ್ಯಾವಿ ಸ್ಪಷ್ಟಪಡಿಸಿದರು.